ಬಿಜೆಪಿಯ ಭ್ರಷ್ಟಾಚಾರ ತನ್ನದೇ ಕಾರ್ಯಕರ್ತನ ಬಲಿ ಪಡೆದಿದೆ: ಆಪ್ ಮುಖಂಡ ಭಾಸ್ಕರ್ ರಾವ್

Prasthutha|

ಬೆಂಗಳೂರು: ಆಡಳಿತರೂಢ ಬಿಜೆಪಿ ಸರ್ಕಾರದ ಭ್ರಷ್ಟಾಚಾರವು ತನ್ನದೇ ಪಕ್ಷದ ಕಾರ್ಯಕರ್ತ ಸಂತೋಪ್ ಪಾಟೀಲ್ ಎಂಬಾತನನ್ನು ಬಲಿ ಪಡೆದಿದೆ ಎಂದು ಆಮ್ ಆದ್ಮಿ ಪಕ್ಷ ಮುಖಂಡ ಭಾಸ್ಕರ್ ರಾವ್ ತಿಳಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರ್ಕಾರ ತನ್ನ ಹೃದಯ ಮತ್ತು ಮನಸ್ಸನ್ನು ಕಳೆದುಕೊಂಡಿದೆ. ಭ್ರಷ್ಟಾಚಾರ ಮತ್ತು ಅಸಮರ್ಥನೆಯನ್ನು ಹಿರಿಯ ಮಂತ್ರಿಗಳು ಮುನ್ನಡೆಸುತ್ತಿದ್ದಾರೆ. ಆಡಳಿತರೂಢ ಪಕ್ಷದ ಸದಸ್ಯನೊಬ್ಬ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದಾನೆ. ಸರ್ಕಾರಕ್ಕೆ ಯುವಕರ ಬಗ್ಗೆ ಕಾಳಜಿ ಇದ್ದರೆ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಸಚಿವ ಸಂಪುಟದಿಂದ ಮಾಡಬೇಕು ಎಂದು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದು ಆಫ್ ಪಕ್ಷ ಸೇರ್ಪಡೆಗೊಂಡಿದ್ದರು.



Join Whatsapp