ಈಶ್ವರಪ್ಪನ ಜನ್ಮ ನಾಯಿ ಜನ್ಮ; ನನ್ನ ಗಂಡನ ಸಾವಿಗೆ ಈಶ್ವರಪ್ಪನೇ ನೇರ ಕಾರಣ: ಸಂತೋಷ್ ಪತ್ನಿ ಆರೋಪ

Prasthutha|

ಬೆಳಗಾವಿ: ನನ್ನ ಗಂಡನ ಸಾವಿಗೆ ಸಚಿವ ಈಶ್ವರಪ್ಪನೇ ನೇರ ಕಾರಣ ಎಂದು ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ ಆರೋಪಿಸಿದ್ದಾರೆ. ಲಂಚಕ್ಕಾಗಿ ನನ್ನ ಗಂಡನನ್ನು ಮುಗಿಸಿಬಿಟ್ಟಿದ್ದಾರೆ, ಇಂಥ ಭ್ರಷ್ಟ ಸರಕಾರ, ಭ್ರಷ್ಟ ಸಚಿವರು ಎಲ್ಲಿಯೂ ಇರಬಾರದು, ನನ್ನ ಸಂಸಾರ ಸಮಾಧಿ ಮಾಡಿರುವ ಈಶ್ವರಪ್ಪನದ್ದು ಒಂದು ಜನ್ಮನಾ..ಅವನದ್ದು ನಾಯಿ ಜನ್ಮ ಎಂದು ಕಿಡಿಕಾರಿದ್ದಾರೆ.

- Advertisement -


ಇನ್ನು ಮದುವೆಯಾಗಿ ಮೂರು ವರ್ಷ ಆಗಿಲ್ಲ, ಆಗಲೇ ನನ್ನ ಗಂಡನನ್ನು ಲಂಚದ ಕಾರಣಕ್ಕಾಗಿ ಸಚಿವ ಕೆ.ಎಸ್. ಈಶ್ವರಪ್ಪ ನುಂಗಿಬಿಟ್ಟಿದ್ದಾರೆ, ನನ್ನ ಗಂಡ ಹಲವೆಡೆ ಸಾಲ ಮಾಡಿ, ನನ್ನ ಚಿನ್ನಾಭರಣ ಅಡವಿಟ್ಟು ಕಾಮಗಾರಿ ಮಾಡಿದ್ದಾರೆ. ಮಧ್ಯಾಹ್ನ ಊಟ ಮಾಡದೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು, ಹಣಕ್ಕಾಗಿ ವರ್ಷಗಳಿಂದ ಅಲೆದಾಡಿಸಿ ಈಗ ನನಗ್ಯಾರೂ ಅಂತ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಸಂತೋಷ್ ಪತ್ನಿ ಜಯಶ್ರೀ ಕಣ್ಣೀರು ಹಾಕಿದ್ದಾರೆ.

- Advertisement -


ಸಚಿವ ಈಶ್ವರಪ್ಪ ಕಾಮಗಾರಿಯ 40% ಲಂಚ ಕೇಳಿದ್ದನ್ನು ನಮ್ಮೊಂದಿಗೆ ಹೇಳುತ್ತಿದ್ದರು, ಕಾಮಗಾರಿ ಪೂರ್ಣಗೊಂಡ ಬಳಿಕ ಹಣ ಕೊಡುತ್ತೇನೆ ಎಂದು ಈಶ್ವರಪ್ಪ ಅವರೇ ಹೇಳಿದ್ದರು. ನನ್ನ ಗಂಡನನ್ನು ಆತ್ಮಹತ್ಯೆ ಮಾಡುವಂತೆ ಈಶ್ವರಪ್ಪನವರೇ ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.



Join Whatsapp