ಕಲ್ಲಂಗಡಿ ವ್ಯಾಪಾರಿ ನಬೀಸಾಬ್ ಮನೆಗೆ SDPI ನಿಯೋಗ ಭೇಟಿ

Prasthutha|

ಹುಬ್ಬಳ್ಳಿ: ಧಾರವಾಡ ನಗರದ ನುಗ್ಗಿಕೇರಿ ದೇವಸ್ಥಾನದ ಆವರಣದಲ್ಲಿ ಮುಸ್ಲಿಮ್ ವ್ಯಾಪಾರಿ ನಬೀಸಾಬ್ ಎಂಬವರ ಅಂಗಡಿಗೆ ಶ್ರೀರಾಮ ಸೈನ್ಯದ ಗೂಂಡಾ ಕಾರ್ಯಕರ್ತರು ದಾಳಿ ಮಾಡಿ ಐದು ಕ್ವಿಂಟಲ್ ಕಲ್ಲಂಗಡಿ ಹಣ್ಣುಗಳನ್ನು ಒಡೆದು ಹಾಕಿ ರಸ್ತೆಗೆ ಚೆಲ್ಲಿ ತಿನ್ನುವ ಆಹಾರವನ್ನು ನಾಶ ಮಾಡಿರುವುದು ಖಂಡನಾರ್ಹ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷರಾದ ಇರ್ಷಾದ್ ಅಹ್ಮದ್ ಅತ್ತಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇಂದು ಧಾರವಾಡದಲ್ಲಿ ನಬೀಸಾಬ್ ಕಿಲ್ಲೆದಾರ ರವರ ಮನೆಗೆ ಹೋಗಿ ಧೈರ್ಯ ತುಂಬಿದ ಅವರು ಕಾನೂನಾತ್ಮಕ ಹೋರಾಟದಲ್ಲಿ ಸಹಾಯ ಮಾಡುವ ಭರವಸೆ ನೀಡಿದರು.



Join Whatsapp