ಕೊರೋನಾ ಇನ್ನೂ ಮಾಯವಾಗಿಲ್ಲ, ಎಚ್ಚರ ಅಗತ್ಯ: ಪ್ರಧಾನಿ ಮೋದಿ

Prasthutha|

- Advertisement -

ಗುಜರಾತ್: ಕೊರೋನಾ ಇನ್ನೂ ಮಾಯವಾಗಿಲ್ಲ, ಪುನರುಜ್ಜೀವನಗೊಳ್ಳುತ್ತಲೇ ಇದೆ. ಎಚ್ಚರಿಕೆ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಕೊರೋನಾ ಒಂದು ದೊಡ್ಡ ಬಿಕ್ಕಟ್ಟು, ಬಿಕ್ಕಟ್ಟು ಈಗ ಮುಗಿದಿದೆ ಎಂದು ನಾವು ಹೇಳುತ್ತಿಲ್ಲ. ಇದು ವಿರಾಮ ತೆಗೆದುಕೊಂಡಿರಬಹುದು. ಆದರೆ,ಅದು ಯಾವಾಗ ಮರುಕಳಿಸುತ್ತದೆ ಎಂದು ನಮಗೆ ತಿಳಿದಿಲ್ಲ. ಇದು ‘ಬಹುರೂಪಿ’ ಕಾಯಿಲೆ. ಇದನ್ನು ನಿಲ್ಲಿಸಲು ಈಗಾಗಲೇ ಸುಮಾರು 185 ಕೋಟಿ ಲಸಿಕೆಗಳನ್ನ ನೀಡಲಾಗಿದೆ. ಇದು ಜಗತ್ತನ್ನು ಅಚ್ಚರಿಗೊಳಿಸಿದೆ ಎಂದು ಹೇಳಿದರು.



Join Whatsapp