ವಾಸ್ತವದಲ್ಲಿ ಕುತುಬ್ ಮಿನಾರ್ ವಿಷ್ಣು ಸ್ತಂಭ ; ವಿ ಎಚ್ ಪಿ ಮುಖಂಡನ ವಿವಾದಾತ್ಮಕ ಹೇಳಿಕೆ

Prasthutha|

ಹೊಸದಿಲ್ಲಿ: ಭಾರತೀಯ ಐತಿಹಾಸಿಕ ಕುರುಹುಗಳಲ್ಲೊಂದಾದ ದೆಹಲಿಯ ಖ್ಯಾತ ಕುತುಬ್ ಮಿನಾರ್ ವಾಸ್ತವವಾಗಿ ವಿಷ್ಣುಸ್ತಂಭ ಎಂಬ ಹೇಳಿಕೆ ನೀಡುವ ಮೂಲಕ ವಿಶ್ವಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಲ್ ಹೊಸ ವಿವಾದವೊಂದನ್ನು  ಹುಟ್ಟುಹಾಕಿದ್ದಾರೆ.

- Advertisement -

“ಕುತುಬ್ ಮಿನಾರ್ ವಾಸ್ತವವಾಗಿ ವಿಷ್ಣುಸ್ತಂಭ. 27 ಹಿಂದೂ- ಜೈನ ದೇಗುಲಗಳನ್ನು ಧ್ವಂಸ ಮಾಡಿ ಪಡೆದ ಸಾಮಗ್ರಿಗಳಿಂದ, ಹಿಂದೂ ಸಮುದಾಯವನ್ನು ಅಣಕಿಸುವ ಸಲುವಾಗಿ ಇದನ್ನು ನಿರ್ಮಿಸಲಾಗಿದೆ” ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಹಿಂದೆ ಕೆಡವಿದ ಎಲ್ಲ 27 ಕಡೆಗಳಲ್ಲಿ ಕೂಡಾ ದೇವಸ್ಥಾನಗಳನ್ನು ಪುನರ್ ನಿರ್ಮಿಸಿ, ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಬನ್ಸಲ್ ಒತ್ತಾಯಿಸಿದ್ದಾರೆ.



Join Whatsapp