400 ಹೋತ ಬಲಿಕೊಟ್ಟ ಶಾಸಕ ಪ್ರೀತಂಗೌಡ: ಜಟ್ಕಾ ಕಟ್ ಮೂಲಕ ಹೋತ ವಧೆ

Prasthutha|

ಹಾಸನ: ಶ್ರೇಯಸ್ಸಿಗಾಗಿ ಶಕ್ತಿ ದೇವತೆಗೆ ಹರಕೆ ಹೊತ್ತಿದ್ದ ಶಾಸಕ ಪ್ರೀತಂಗೌಡ 400 ಹೋತಗಳನ್ನು ಬಲಿಕೊಟ್ಟು ಹರಕೆ ತೀರಿಸಿದ್ದಾರೆ. 

- Advertisement -

ಹಾಸನ ತಾಲ್ಲೂಕಿನ ಶಕ್ತಿದೇವತೆ ಪುರದಮ್ಮನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಕುಟುಂಬ ಸಮೇತ ಪುರದಮ್ಮ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಶಾಸಕರು ಈ ವೇಳೆ 400 ಹೋತಗಳನ್ನು ಬಲಿಕೊಟ್ಟು ಹರಕೆ ತೀರಿಸಿದ್ದಾರೆ. ಶಾಸಕರ ಅಭಿಮಾನಿಗಳು ಜಟ್ಕಾ ಕಟ್ ಮೂಲಕವೇ ಹೋತಗಳನ್ನು ಬಲಿಕೊಟ್ಟಿದ್ದಾರೆ.

ಪುರದಮ್ಮ ಸನ್ನಿದಿಯಲ್ಲಿ ನೂರಾರು ಮೇಕೆ ಬಲಿ ನೀಡಿ ಹರಕೆ ಸಲ್ಲಿಸಲಾಗಿದ್ದು, ಹರಕೆಯ ಬಳಿಕ ಮಧ್ಯಾಹ್ನ ಕ್ಷೇತ್ರದ ಸಹಸ್ರಾರು ಜನರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.



Join Whatsapp