ಕಾಡುಕೋಣ ದಾಳಿ; ಗಂಭೀರ ಗಾಯಗೊಂಡ ರೈತ

Prasthutha|

ತೀರ್ಥಹಳ್ಳಿ: ಕಾಡುಕೋಣದ ದಾಳಿಗೆ ತುತ್ತಾಗಿ ರೈತರೊಬ್ಬರು ಗಂಭೀರ ಗಾಯಗೊಂಡ ಘಟನೆ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ನಡೆದಿದೆ.

- Advertisement -

ಅಸಿಮನೆ ರಾಘವೇಂದ್ರ ಎಂಬವರು ದಾಳಿಗೆ ತುತ್ತಾದ ವ್ಯಕ್ತಿ. ತಮ್ಮ ಮನೆ ಮುಂದಿರುವ ಅಡಿಕೆ ತೋಟಕ್ಕೆ ಬಂದಿದ್ದ ಕಾಡುಕೋಣವನ್ನು ಓಡಿಸಲು ರಾಘವೇಂದ್ರ ತಮ್ಮ ಪತ್ನಿಯ ಜೊತೆ ತೋಟಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಕಾಡುಕೋಣ ರಾಘವೇಂದ್ರರವರ ಮೇಲೆ ಎಗರಿ ಕೋಡಿನಿಂದ ತಿವಿದ ಪರಿಣಾಮ ರಾಘವೇಂದ್ರರವರ ಹೊಟ್ಟೆಗೆ ಗಂಭೀರ ಗಾಯವಾಗಿದೆ. ಇದನ್ನು ಕಂಡ ರಾಘವೇಂದ್ರ ಪತ್ನಿ ಪ್ರಜ್ಞೆತಪ್ಪಿ ಬಿದ್ದಿದ್ದರು.

ಈ ಘಟನೆಯನ್ನು ತಿಳಿದ ಆಗುಂಬೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ  ಹಸಿರುಮನೆ ನಂದನ್ ಹಾಗೂ ಅವರ ಸ್ನೇಹಿತರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಗಂಭೀರ ಗಾಯಗೊಂಡಿರುವ ರಾಘವೇಂದ್ರ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ರಾಘವೇಂದ್ರ ಅವರ ಜೊತೆಯಲ್ಲಿಯೇ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ‌.



Join Whatsapp