ರಾಮನಗರದಲ್ಲಿ ಅಪಘಾತಕ್ಕೀಡಾಗಿದ್ದ ಪುತ್ತೂರಿನ ಯುವಕ ಮೃತ್ಯು

Prasthutha|

ಬೆಂಗಳೂರು: ಬೆಂಗಳೂರು- ಮೈಸೂರು ರಸ್ತೆಯ ರಾಮನಗರದಲ್ಲಿ ಕಳೆದ ಸೋಮವಾರ ಅಪಘಾತಕ್ಕೀಡಾಗಿದ್ದ ಪುತ್ತೂರು ಮೂಲದ ಕೂರ್ನಡ್ಕ ನಿವಾಸಿ ಆಶಿಕ್ ಸುನೈಫ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

- Advertisement -

ಪುತ್ತೂರು ಪೇಟೆಯ ಬಳಿ ಬ್ಯಾಗ್ ಮಳಿಗೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಶಿಕ್, ಕಳೆದ ಸೋಮವಾರದಂದು ಬೆಂಗಳೂರಿಗೆಂದು ತೆರಳಿದ್ದ ವೇಳೆ ರಾಮನಗರದಲ್ಲಿ ಡಿವೈಡರ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಎನ್ನಲಾಗಿದೆ.

ತಲೆಯ ಮೇಲ್ಭಾಕ್ಕೆ ಗಂಭೀರ ಗಾಯಗೊಂಡಿದ್ದ ಯುವಕನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದರು.



Join Whatsapp