ಕಾಪು: ಗುಜರಿ ಅಂಗಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ, ಇಬ್ಬರು ಸಜೀವ ದಹನ !

Prasthutha|

ಕಾಪು: ಗುಜರಿ ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಕಾಪು ತಾಲೂಕಿನ ಮಲ್ಲಾರು ಪಕೀರಣಕಟ್ಟೆಯಲ್ಲಿ ನಡೆದಿದ್ದು, ಇಬ್ಬರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.

- Advertisement -

ಮೃತರನ್ನು ರಜಾಕ್‌ ಮಲ್ಲಾರ್‌ ಮತ್ತು ರಜಬ್‌ ಚಂದ್ರನಗರ ಎಂದು ಗುರುತಿಸಲಾಗಿದೆ.

ಗುಜರಿ ಅಂಗಡಿಯೊಳಗೆ ಐದು ಮಂದಿ ಇದ್ದರೆಂದು ಹೇಳಲಾಗುತ್ತಿದೆ

- Advertisement -


ಉಡುಪಿ ಅಗ್ನಿಶಾಮಕ ದಳ, ಅದಾನಿ – ಯುಪಿಸಿಎಲ್ ಅಗ್ನಿಶಾಮಕವಾಹನ, ಐ.ಎಸ್.ಪಿ.ಆರ್.ಎಲ್ ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.


ಬೆಂಕಿಯ ಕೆನ್ನಾಲಗೆ ಎಲ್ಲೆಡೆ ಹಬ್ಬುತ್ತಿದ್ದು ಸುತ್ತಮುತ್ತಲಿನ ಮನೆ, ವಸತಿ ಸಮುಚ್ಚಯ, ಮಸೀದಿಗೂ ಹಾನಿಯುಂಟಾಗುವ ಭೀತಿ ಎದುರಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.



Join Whatsapp