ಮತ್ತೆ ಮುಂದುವರಿದ ಕ್ರೈಸ್ತರ ಮೇಲಿನ ದಾಳಿ । ಕರಪತ್ರ ಹಂಚಿದ ನೆಪದಲ್ಲಿ ಕ್ರೈಸ್ತ ಯುವಕನಿಗೆ ಸಂಘಪರಿವಾರದಿಂದ ಗಂಭೀರ ಹಲ್ಲೆ

Prasthutha|

ಹಾಸನ: ಕ್ರೈಸ್ತರ ಮೇಲೆ ಮತ್ತೆ ದಾಳಿ ಮುಂದುವರಿದಿದ್ದು, ಕಾಲೇಜು ಆವರಣದ ಬಳಿ ಕ್ರೈಸ್ತ ಧರ್ಮಕ್ಕೆ ಸೇರಿದ ಕರಪತ್ರಗಳನ್ನು ಹಂಚಿದ ನೆಪದಲ್ಲಿ ಕ್ರೈಸ್ತ ಯುವಕನೊಬ್ಬನಿಗೆ ಸಂಘಪರಿವಾರದ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲ್ಲೆಯ ಬಳಿಕ ಸಂತ್ರಸ್ತ ಯುವಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಹಲ್ಲೆಗೊಳಗಾದ ಕ್ರೈಸ್ತ ಯುವಕನನ್ನು ಮನು ಎಂದು ಗುರುತಿಸಲಾಗಿದ್ದು, ಸಂಘಪರಿವಾರದ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಸದ್ಯ ಸಂತ್ರಸ್ತ ಮನು ಎಂಬಾತನನ್ನು ಐಪಿಸಿ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.



Join Whatsapp