ಮೂರು ವಿಷ ಸರ್ಪಗಳೊಂದಿಗೆ ಯುವಕನ ಹುಚ್ಚಾಟ ! ವೀಡಿಯೋ ವೈರಲ್

Prasthutha|

ಶಿರಸಿ: ಸಾಮಾಜಿಕ ಜಾಲತಾಣಗಳಲ್ಲಿ ‘ಸ್ಟಾರ್’ ಆಗಲು ಹೋಗಿ ಯುವಕನೊಬ್ಬ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.
ಸಯೀದ್ ಎಂಬ ಯುವಕ ಕಾಡಿನೊಳಗೆ ಹೆಡೆ ಎತ್ತಿದ ಮೂರು ನಾಗರಹಾವುಗಳ ಎದುರು ಕುಳಿತು ತನ್ನ ಧೈರ್ಯ ಪ್ರದರ್ಶಿಸಲು ಹೋಗಿ ಇದೀಗ ಆಸ್ಪತ್ರೆ ಸೇರಿದ್ದಾನೆ. ಹಾವುಗಳೊಂದಿಗೆ ‘ಆಟ’ವಾಡುತ್ತಿದ್ದ ಸಯೀದ್ ಮೇಲೆ ಹಾವೊಂದು ನೆಗೆದು ಕಾಲಿಗೆ ಕಚ್ಚುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

- Advertisement -


ಅರಣ್ಯ ಅಧಿಕಾರಿ ಸುಶಾಂತ್ ನಂದ ಎಂಬುವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ನಾಗರಹಾವುಗಳನ್ನು ನಿಭಾಯಿಸುವ ಭಯಾನಕ ರೀತಿ ಇದು. ಹಾವುಗಳು ಚಲನೆಯನ್ನು ಬೆದರಿಕೆಯೆಂದು ಪರಿಗಣಿಸುತ್ತವೆ ಮತ್ತು ಆ ಚಲನೆಯನ್ನೇ ಅನುಸರಿಸುತ್ತವೆ. ಒಮ್ಮೊಮ್ಮೆ ಇದರ ಪ್ರತಿಕ್ರಿಯೆಯೂ ಮಾರಕವಾಗಬಹುದು’ ಎಂದಿದ್ದಾರೆ.



Join Whatsapp