‘ಕೈ’ಕೊಟ್ಟು ಬಿಜೆಪಿ ಸೇರಲಿರುವ ಯು.ಟಿ.ಖಾದರ್ ಆಪ್ತ !

Prasthutha|

► ಖಾದರ್ ಸ್ವಾರ್ಥಿ, ಭ್ರಷ್ಟ ರಾಜಕಾರಣಿ ಎಂದ ಸಂತೋಷ್ ಕುಮಾರ್ ಶೆಟ್ಟಿ

- Advertisement -

ಮಂಗಳೂರು: ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಟಿ.ಖಾದರ್ ಅವರ ಕಾರ್ಯವೈಖರಿಗೆ ಬೇಸತ್ತು 100ಕ್ಕೂ ಅಧಿಕ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತಿರುವುದಾಗಿ ತಿಳಿಸಿದರು. ಖಾದರ್ ಅವರೊಂದಿಗೆ ರಾಜಕಾರಣ ಮಾಡುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು. ಅವರೊಬ್ಬ ಸ್ವಾರ್ಥಿ ಹಾಗೂ ಭ್ರಷ್ಟ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.

- Advertisement -

ನಾಲ್ಕು ಬಾರಿ ಶಾಸಕರಾದರೂ ಜನರ ಮನಸ್ಸಿನಲ್ಲಿ ಉಳಿಯುವಂತಹ ಯಾವುದೇ ಕಾರ್ಯವನ್ನು ಖಾದರ್ ಮಾಡಿಲ್ಲ. ಕ್ಷೇತ್ರಕ್ಕೆ ಯಾವುದೇ ಪ್ರಯೋಜನಕಾರಿ ಯೋಜನೆಯನ್ನೂ ತಂದಿಲ್ಲ ಎಂದು ಆರೋಪಿಸಿದ ಅವರು, ಸಣ್ಣ ಸಣ್ಣ ಒಳರಸ್ತೆಯನ್ನು ಉದ್ಘಾಟನೆ ಮಾಡಿ, ಮದುವೆ, ಮುಂಜಿ ಕಾರ್ಯಕ್ರಮಕ್ಕೆ ಹೋಗಿ ಸರಳ ರಾಜಕಾರಣಿಯಂತೆ ಪೋಸು ಕೊಡುತ್ತಾರೆ. 224 ಶಾಸಕರಲ್ಲಿ ಮನುಷ್ಯತ್ವ, ಕರುಣೆ ಇಲ್ಲದ ಶಾಸಕ ಎಂದು ಕಿಡಿಕಾರಿದರು.



Join Whatsapp