ಮುಸ್ಲಿಂ ಸಮುದಾಯಕ್ಕೆ ಅವಮಾನ: ಪಬ್ಲಿಕ್ ಟಿ.ವಿ ಅರುಣ್ ಬಡಿಗೇರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು

Prasthutha|

ಮಂಗಳೂರು: ಮುಸ್ಲಿಂ ಸಮುದಾಯದವರನ್ನು ಅವಮಾನಿಸಿ, ಕೊಲೆ ಮಾಡಲು‌ ಪ್ರೇರೇಪಿಸಿ ಮಾತನಾಡಿರುವ ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನಲ್ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

- Advertisement -

ದಿನಾಂಕ 22/02/2022 ರ ಮಂಗಳವಾರ ಸಂಜೆ 7:30 ಗಂಟೆಗೆ ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನಲ್ ನಲ್ಲಿ “ಕೊಲೆ ಮತ್ತು ರಾಜಕೀಯ” ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಚರ್ಚಾಕೂಟದಲ್ಲಿ ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನಲ್ ನ ನಿರೂಪಕ ಅರುಣ್ ಬಡಿಗೇರ್ ಎಂಬುವರು ಮಾತನಾಡುತ್ತ, ಮುಸ್ಲಿಂ ಸಮುದಾಯದವರನ್ನು ಅವಮಾನಿಸುವ ಉದ್ದೇಶದೊಂದಿಗೆ ಮುಸ್ಲಿಮರಿಗೆ ಹಾಕಕ್ಕೆ ಬಟ್ಟೆ ಇಲ್ಲ, ತಿನ್ನೋಕ್ಕೆ ಹಿಟ್ಟು ಇಲ್ಲದೆ ಇದ್ರೂ ಕೂಡ 4-5 ಮದುವೆ ಮಾಡಿ ಕೊಳ್ಳುವ ಅವಕಾಶ ಮಾಡಿ ಕೊಟ್ಟರು, 4-5 ಮಕ್ಕಳನ್ನು ಮಾಡಲು ಕೂಡ, ಪಾಪುಲೇಷನ್ ಬೆಳೆಯಲಿ ಎಂಬ ಅವಕಾಶ ಮಾಡಿ ಕೊಟ್ಟರು, ತುಕಡೇ ತುಕಡೇ ಗ್ಯಾಂಗ್ ನ ಬೆಂಬಲಕ್ಕೆ ನಿಂತ್ರಿ ನೀವು, ಈ ದೇಶವನ್ನು ಇಬ್ಬಾಗ ಮಾಡುವಂತಹ ಗ್ಯಾಂಗ್ ಜೊತೆ ನಿಂತು ಕೊಂಡ್ರಿ ಎಂದು ಟಿವಿ ನಿರೂಪಕ ಅರುಣ್ ಬಡಿಗೇರ್ ಹೇಳಿದ್ದಾರೆ.

ಅಲ್ಲದೇ ಮುಸ್ಲಿಂ ಸಮುದಾಯದವರು ರೇಪ್ ಮಾಡುವವರು, ಕೆಟ್ಟ ಜನ ಎಂದು ಬಿಂಬಿಸುವ ಪ್ರಯತ್ನವನ್ನು ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನಲ್ ನಿರೂಪಕ ಅರುಣ್ ಬಡಿಗಾರ್ ಮಾಡಿರುತ್ತಾರೆ. ಮುಸ್ಲಿಂ ಸಮುದಾಯದವರನ್ನು ಅವಮಾನಿಸಿ, ಮುಸ್ಲಿಂ ಸಮುದಾಯವರು ಕೆಟ್ಟವರು ಎಂದು ಸಮಾಜದಲ್ಲಿ ಬಿಂಬದ ಸುವ ಮತ್ತು ಮುಸ್ಲಿಂ ಸಮುದಾಯದವನ್ನು ವಂಶ ಹತ್ಯೆ ನಡೆಸಲು ಪ್ರೇರೇಪಿಸುವುದು ಕಂಡುಬಂದಿದೆ. ಅಲ್ಲದೆ ಈ ದೇಶದಲ್ಲಿ ಹಿಂದು- ಮುಸ್ಲಿಂ ಪರಸ್ಪರ ಕಚ್ಚಾಡಿ ಇಲ್ಲಿ ಕೋಮು ಗಲಭೆ ಆಗಲು ಪ್ರಯತ್ನ ಮಾಡಿದ್ದಾನೆ.

- Advertisement -

ಈ ಹೇಳಿಕೆಯಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಅವಮಾನ ಆಗಿದೆ. ಸಮಾಜದಲ್ಲಿ ಭಾವೈಕ್ಯತೆ ಹಾಳು ಮಾಡುವ ನಿಟ್ಟಿನಲ್ಲಿ ಅರುಣ್ ಬಡಿಗೇರ್ ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ತಮ್ಮ ಸುದ್ದಿ ವಾಹಿನಿಯಲ್ಲಿ ಮಾತನಾಡಿರುತ್ತಾರೆ. ಆದುದರಿಂದ ಸಂವಿಧಾನ ವಿರೋಧಿ ಹೇಳಿಕೆ ನೀಡಿ, ಮುಸ್ಲಿಂ ಸಮುದಾಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿದ ಅರುಣ್ ಬಡಿಗೇರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ SDPI ಮುಖಂಡರಾದ ಶಾಕಿರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ಅನ್ವರ್ ಪೆರುವಾಯಿ, ನಝೀರ್ ಪುಣಚ ಇದ್ದರು

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp