ಜಯಲಲಿತಾ ಸಾವು ಪ್ರಕರಣ: ಆಯೋಗದ ಮುಂದೆ ಹಾಜರಾಗುವಂತೆ ಪನ್ನೀರ್ ಸೆಲ್ವಂಗೆ ಸಮನ್ಸ್

Prasthutha|

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ಆರುಮುಗಸ್ವಾಮಿ ಆಯೋಗವು ಎಐಎಡಿಎಂಕೆ ನಾಯಕ ಪನ್ನೀರ್ ಸೆಲ್ವಂ ಅವರಿಗೆ ಮಾರ್ಚ್ 21 ರಂದು ಆಯೋಗದ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

- Advertisement -

ಎಐಎಡಿಎಂಕೆ ಮಾಜಿ ಮುಖ್ಯಸ್ಥರ ಸಾವಿನ ಕುರಿತು ಆಯೋಗವು ತನಿಖೆ ನಡೆಸುತ್ತಿದ್ದು, ಇಲ್ಲಿಯವರೆಗೆ, ವೈದ್ಯರು, ದಾದಿಯರು, ಜಯಲಲಿತಾ ಅವರ ಸಿಬ್ಬಂದಿ ಸೇರಿದಂತೆ 154 ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ.

ಜಯಲಲಿತಾ ಸಾವಿನ ನಿಗೂಢತೆಯ ಕುರಿತು ತನಿಖೆ ನಡೆಸಲು ಆಯೋಗವನ್ನು ರಚಿಸುವಂತೆ ಒತ್ತಾಯಿಸಿದ್ದ ಓ ಪನ್ನೀರ್ ಸೆಲ್ವಂ ಅವರಿಗೆ ಆಯೋಗವು ಈ ಹಿಂದೆ ಸಮನ್ಸ್ ನೀಡಿತ್ತು. ಆದರೆ, ಆಯೋಗದ ಮುಂದೆ ಹಾಜರಾಗಲು ಇನ್ನಷ್ಟು ಕಾಲಾವಕಾಶ ಕೋರಿದ್ದರು.

- Advertisement -

ಮಾಜಿ ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರಿಗೆ ಹೊಸದಾಗಿ ಸಮನ್ಸ್ ಜಾರಿಯಾಗಿದೆ.

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರು ಹೃದಯಾಘಾತದಿಂದ ಡಿಸೆಂಬರ್ 6, 2016 ರಂದು ನಿಧನರಾಗಿದ್ದರು. ಅವರ ಸಾವಿಗೆ ಕಾರಣವಾದ ಕಾರಣಗಳನ್ನು ತನಿಖೆ ಮಾಡಲು ಟಿಎನ್ ಸರ್ಕಾರವು ನ್ಯಾಯಮೂರ್ತಿ ಆರುಮುಗಸ್ವಾಮಿ ನೇತೃತ್ವದ ಆಯೋಗವನ್ನು ನೇಮಿಸಿತು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp