ವಿವಾಹಕ್ಕೆ ಮನೆಯವರ ವಿರೋಧ: ರೈಲು ಹಳಿಗೆ ತಲೆ ಇಟ್ಟು ಪ್ರೇಮಿಗಳು ಆತ್ಮಹತ್ಯೆ

Prasthutha|

ಬೆಂಗಳೂರು: ಪ್ರೇಮ ವಿವಾಹಕ್ಕೆ ಕುಟುಂಬದವರು ಒಪ್ಪಲಿಲ್ಲ ಎಂದು ಯುವ ಪ್ರೇಮಿಗಳು ರೈಲಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಯಪ್ಪನಹಳ್ಳಿ ಬಳಿ  ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಸಮಂದೂರು ಬಳಿಯ ಮಾರನಾಯಕನಹಳ್ಳಿಯ ಮಣಿ ಮತ್ತು ತಮಿಳುನಾಡಿನ ಕೊತ್ತಗೊಂಡಪಲ್ಲಿಯ ಅನುಷಾ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಸಮಂದೂರು ದಿನ್ನೆ ರೈಲ್ವೆ ಹಳಿ ಮೇಲೆ ಹೊಸೂರು ಕಡೆಗೆ ಹೊರಟಿದ್ದ ರೈಲಿಗೆ ಇವರಿಬ್ಬರೂ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಮಾರನಾಯಕನಹಳ್ಳಿಯ ಯುವಕನ ಮನೆ  ಬಳಿ ಕಳೆದ ಫೆ.26ರಂದು ಇಬ್ಬರು ಕಾಣಿಸಿಕೊಂಡಿದ್ದರು. ಈ ಕುರಿತು ಯುವತಿಯ ಮನೆಗೆ ಸಂಬಂಧಿಕರು ವಿಷಯ ಮುಟ್ಟಿಸಿದ್ದರು.

ಅನಂತರ ಸಂಜೆಯ ವೇಳೆಗೆ ಇಬ್ಬರ ಮೃತ ದೇಹಗಳು ರೈಲ್ವೆ ಹಳಿಯ ಮೇಲೆ ಕಾಣಿಸಿಕೊಂಡಿವೆ. ರಾತ್ರಿ ಬೈಯಪ್ಪನಹಳ್ಳಿ ಪೊಲೀಸರು ಮಾಹಿತಿ ತಿಳಿದು ಶವಗಳನ್ನು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



Join Whatsapp