ಠಾಣೆಗೆ ಕರೆದೊಯ್ದು ‌ವಿಚಾರಣೆ, ನೊಂದ ಮಹಿಳೆ ನೇಣಿಗೆ ಶರಣು

Prasthutha|

ಬೆಂಗಳೂರು: ಪೊಲೀಸರ ಕಿರುಕುಳ ಹಾಗೂ ನೆರೆಹೊರೆಯವರ ಚುಚ್ಚು ಮಾತಿನಿಂದ ನೊಂದ ಗೃಹಿಣಿ ನೇಣಿಗೆ ಶರಣಾಗಿರುವ ದಾರುಣ ಘಟನೆ ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ.

- Advertisement -

ಮಾರುತಿನಗರದ ಅಖಿಲಾ (35) ನೇಣಿಗೆ ಶರಣಾದವರು.ಆತ್ಮಹತ್ಯೆಗೂ ಮುನ್ನ ಮಹಿಳೆಯು ಸಾಲದ ಹಣಕ್ಕಾಗಿ ಚಂದನ್ ಎಂಬಾತ ಕೊಡುತ್ತಿದ್ದ ಕಾಟ ಹಾಗೂ ನೆರೆಹೊರೆಯವರ ಚುಚ್ಚು ಮಾತಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್​ನೋಟ್ ಬರೆದಿಟ್ಟಿದ್ದಾರೆ.

ಮೃತ ಅಖಿಲಾ ಪತಿ ಮಧುಸೂಧನ್ ಅವರು ಸ್ಥಳೀಯ ನಿವಾಸಿ ಚಂದನ್ ಅಲಿಯಾಸ್ ಚನ್ನಕೇಶವ ಬಳಿ 1 ಲಕ್ಷ ರೂ. ಸಾಲ ಪಡೆದಿದ್ದರಂತೆ. ಚಂದನ್ ಸಾಲದ ಹಣ ವಾಪಸ್ ನೀಡುವಂತೆ ಪ್ರತಿನಿತ್ಯ ಪೊಲೀಸರ ಮೂಲಕ ಕಾಟ ಕೊಡಿಸುತ್ತಿದ್ದ.

- Advertisement -

ಮಧುಸೂಧನ್ ಇಲ್ಲದ ವೇಳೆ ಮನೆಗೆ ಬಂದ ಪೊಲೀಸರು, ಅಖಿಲಾರನ್ನು ಪೊಲೀಸ್ ಜೀಪ್​ನಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. ಮಹಿಳೆ ಠಾಣೆಯಿಂದ ವಾಪಸ್ ಬಂದ ನಂತರ ನೆರೆಹೊರೆಯವರ ಚುಚ್ಚು ಮಾತಿಗೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp