ಶಿವಮೊಗ್ಗ: ಸಂಘಪರಿವಾರದಿಂದ ‘ಛಲಗಾರ ಪತ್ರಕರ್ತ ನಿಶಾಂತ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಬೆದರಿಕೆ

Prasthutha|

ತೀರ್ಥಹಳ್ಳಿ: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಮುಖಂಡ ಹರ್ಷನ ಹತ್ಯೆ ಮತ್ತು ನಂತರದ ಹಿಂಸಾಚಾರದ ನಡುವೆ ಸಂಘಪರಿವಾರದ ಕಾರ್ಯಕರ್ತರಿಂದ ಜಿಲ್ಲೆಯ ಪತ್ರಕರ್ತರಿಗೆ ಬಹಿರಂಗವಾಗಿ ಬೆದರಿಕೆವೊಡ್ಡುತ್ತಿರುವ ಘಟನೆ ವರದಿಯಾಗಿದೆ.

- Advertisement -

ಸ್ಥಳೀಯ ‘ಛಲಗಾರ’ ಪತ್ರಿಕೆಯ ಸಂಪಾದಕರಾದ ನಿಶಾಂತ್ ಎಂಬವರಿಗೆ ‘ವಿಶ್ವಾಸ್ ಜಿಗಳಗೋಡು’ ಎಂಬಾರ ತನ್ನ ಫೇಸ್ಬುಕ್ ಖಾತೆಯಲ್ಲಿ ಬಹಿರಂಗವಾಗಿ ಬೆದರಿಕೆವೊಡ್ಡುತ್ತಿರುವ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವಿಶ್ವಾಸ್ ಜಿಗಳಗೋಡು ಎಂಬಾತ ‘ಛಲಗಾರ’ ಪತ್ರಿಕೆಯ ಸಂಪಾದಕರಾದ ನಿಶಾಂತ್ ಅವರನ್ನು ಉದ್ದೇಶಿಸಿ ‘ನಿನ್ನ ಸಹೋದರನಾಗಿ ಹೇಳುತ್ತಿದ್ದೇನೆ, ಒಂದು ಸಲ ಮಾರಿಕಾಂಬ ದೇವಸ್ಥಾನದ ಬಳಿ ಪೆಟ್ಟು ತಿಂದಿದ್ದೆ. ಮತ್ತೆ ಹಿಂದೂ ಸಂಘಟನೆಗಳನ್ನು ಕೆಣಕಿ ಪೆಟ್ಟು ತಿನ್ನಬೇಡ’ ಎಂದು ಬಹಿರಂಗವಾಗಿ ಹಲ್ಲೆ ನಡೆಸುವ ಬೆದರಿಕೆವೊಡ್ಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಇತ್ತೀಚೆಗೆ ಮೃತ ಹರ್ಷನ ಅಂತಿಮ ಯಾತ್ರೆಯನ್ನು ವರದಿ ಮಾಡಲು ತೆರಳಿದ್ದ ಹಲವು ವರದಿಗಾರರನ್ನು ಗುರಿಯಾಗಿಸಿ ಸಂಘಪರಿವಾರದ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಸಂಘಪರಿವಾರದ ಕಾರ್ಯಕರ್ತರ ಈ ಅಮಾನವೀಯ ಕೃತ್ಯವನ್ನು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿತ್ತು.



Join Whatsapp