ಕಂದಕ್ ಮುಸ್ಲಿಂ ಜಮಾತ್ ನೂತನ ಕಚೇರಿ ಉದ್ಘಾಟನೆ

Prasthutha|

ಮಂಗಳೂರು: ಕಂದಕ್ ಮುಸ್ಲಿಂ ಜಮಾತ್ ನೂತನ ಕಚೇರಿ ಉದ್ಘಾಟನಾ ಹಾಗೂ ಪದ್ಮಶ್ರೀ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮವು ಕಂದಕ್ ಪ್ರದೇಶದ ಬದ್ರಿಯಾ ರಸ್ತೆಯಲ್ಲಿ ಗುರುವಾರ ನಡೆಯಿತು.

- Advertisement -

ಕಚೇರಿಯ ಉದ್ಘಾಟನೆಯನ್ನು ಕೇಂದ್ರ ಜುಮಾ ಮಸೀದಿಯ ಖತೀಬ್ ಮೌಲನಾ ಅಬೂ ಅಕ್ರಂ ಬಾಖವಿ, ಬದ್ರಿಯಾ ಜುಮಾ ಮಸೀದಿ ಖತೀಬ್ ಮೌಲನಾ ಶೇಖ್ ಅಬ್ದುಲ್ಲಾ ಮುಸ್ಲಿಯಾರ್ ಹಾಗೂ ಅಝ್ಹರಿಯಾ ಮದ್ರಸದ ಮುದರಿಸ್ ಮೌಲನಾ ಹೈದರ್ ಮದನಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ  ನಿಕಟ ಪೂರ್ವ ಬ್ಯಾರಿ ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಸ್ಥಳೀಯ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್,  ಹಿರಿಯರಾದ ಉಸ್ಮಾನ್ ಮೊಯಿದಿನ್, ಅಬ್ದುಲ್ ರೆಹಮಾನ್, ಅಬ್ದುಲ್ ಖಾದರ್ ರವರೊಂದಿಗೆ ಕಂದಕ್ ಮುಸ್ಲಿಂ ಜಮಾತಿನ ಅಬ್ದುಲ್ ಸಲಾಂ ಕಂದಕ್, ಶರೀಫ್, ಸಿದ್ದೀಕ್, ಅಶ್ರಫ್, ಆಸೀಫ್, ಸಲಾಂ ಕುತ್ತಾರ್, ಕಾಸಿಂ, ಹಕೀಂ, ಮುಹಮ್ಮದ್ ಹಸನ್, ಸಫ್ವಾನ್, ಮುಸ್ತಫಾ, ಮೊಶಿನ್, ಅಲ್ತಾಫ್ ಕೆ.ಪಿ, ಇನ್ನಿತರರು ಉಪಸ್ಥಿತರಿದ್ದರು.



Join Whatsapp