ಹಿಜಾಬ್ ಪ್ರಕರಣಕ್ಕೂ ಶಿವಮೊಗ್ಗ ಹತ್ಯೆಗೂ ಯಾವುದೇ ಸಂಬಂಧವಿಲ್ಲ: ಕುಮಾರಸ್ವಾಮಿ

Prasthutha|

ಮೈಸೂರು: ಹಿಜಾಬ್ ಪ್ರಕರಣಕ್ಕೂ ಶಿವಮೊಗ್ಗ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200% ಹೇಳುತ್ತೇನೆ, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಬಿಜೆಪಿ – ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಮುಂದಿನ ಚುನಾವಣೆವರೆಗೂ ಇಂತಹ ಗಲಾಟೆ ನಡೆಯುತ್ತಿರುತ್ತವೆ.  ಕೋಮು ಸೌಹಾರ್ದತೆ ವಿಚಾರದಲ್ಲಿ ರಾಜಕೀಯ ಪಕ್ಷಗಳ ಮುಖಂಡರ ಮಕ್ಕಳ ಸಾಯಲ್ಲ ಎಂದು ಕಿಡಿಕಾರಿದರು.



Join Whatsapp