ಭಾರತವನ್ನು ಹಿಜಾಬ್ ಮಯ ಮಾಡಲು ಬಂದರೆ ತುಂಡು ತುಂಡು ಮಾಡುತ್ತೇವೆ: ABVP ನಾಯಕಿ

Prasthutha|

ವಿಜಯಪುರ: ಭಾರತವನ್ನು ಹಿಜಾಬ್‌ ಮಯ ಮಾಡಲು ಬಂದರೆ ಛತ್ರಪತಿ ಶಿವಾಜಿ ಕೈಯಲ್ಲಿರುವ ಖಡ್ಗದಿಂದ ಇಂಚಿಂಚಾಗಿ ಕಡಿಯುತ್ತೇವೆ ಎಂದು ಎಬಿವಿಪಿ ನಗರ ಪ್ರಮುಖರಾದ ಪೂಜಾ ವೀರಶೆಟ್ಟಿ ಹೇಳಿದ್ದಾರೆ.

- Advertisement -

ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷಾ ಕೊಲೆ ಖಂಡಿಸಿ ನಗರದಲ್ಲಿ ಬುಧವಾರ ವಿಶ್ವಹಿಂದೂ ಪರಿಷತ್‌, ಬಜರಂಗದಳ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹರ್ಷಾ ಕೊಲೆ ಆರೋಪಿಗಳನ್ನು ಪೊಲೀಸರು 24 ತಾಸುಗಳಲ್ಲಿ ಬಂಧಿಸಿರುವುದು ಖುಷಿ ನೀಡಿದೆ. ಆದರೆ, ಬರಿ ಆರೋಪಿಗಳ ಬಂಧನವಾದರೆ ಸಾಲದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಿಮ್ಮ ಕೈಯಲ್ಲಿ ಆಗದಿದ್ದರೆ ನಮ್ಮ ಕೈಗೆ 24 ತಾಸು ಅಲ್ಲ, ಒಂದು ತಾಸು ಅಧಿಕಾರ ಕೊಟ್ಟು ನೋಡಿ, ಮಾಡಿ ತೋರಿಸುತ್ತೇವೆ ಎಂದು ಹೇಳಿದ್ದಾರೆ.



Join Whatsapp