ಅರಣ್ಯ ಇಲಾಖೆಯ ಗಾರ್ಡ್ ದಂಪತಿ ಆತ್ಮಹತ್ಯೆ

Prasthutha|

ಮಡಿಕೇರಿ: ಶ್ರೀಮಂಗಲ ವನ್ಯ ಜೀವಿ ವಲಯ ವ್ಯಾಪ್ತಿಯ ಬಿರುನಾಣಿ ವಿಭಾಗದ ಅರಣ್ಯ ಇಲಾಖೆಯ ಗಾರ್ಡ್ ಆಗಿದ್ದ ಯುವರಾಜ್ (25) ಮತ್ತು ಅವರ ಪತ್ನಿ ಶಿಲ್ಪ(22) ಅವರು ನೇಣು ಬಿಗಿದುಕೊಂಡು ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿರುನಾಣಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಶಿವಮೊಗ್ಗ ಮೂಲದ ದಂಪತಿಗಳಾದ ಯುವರಾಜ್ ಮತ್ತು ಪತ್ನಿ ಶಿಲ್ಪ 10 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಸದ್ಯ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp