ಆರ್ ಎಸ್ ಎಸ್ ನವರೇ ಈ ಪೆದ್ದ ಈಶ್ವರಪ್ಪನ ಬಾಯಲ್ಲಿ ಹೇಳಿಸಿರುವುದು: ಸಿದ್ದರಾಮಯ್ಯ

Prasthutha|

ಬೆಂಗಳೂರು:  ಆರ್ ಎಸ್ ಎಸ್ ನವರೇ ಈಶ್ವರಪ್ಪ ಬಾಯಲ್ಲಿ ಹೇಳಿಸಿರುವುದು. ಈ ಪೆದ್ದ ಹೇಳಿಬಿಟ್ಟಿದ್ದಾನೆ. ಆರ್ ಎಸ್ ಎಸ್ ನವರು ಯಾವತ್ತೂ ರಾಷ್ಟ್ರಧ್ವಜಕ್ಕೆ, ರಾಷ್ಟ್ರಗೀತೆಗೆ, ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ. ರಾಷ್ಟ್ರಧ್ವಜದಲ್ಲಿರುವ ತ್ರಿವರ್ಣಕ್ಕೆ ಗೌರವ ಕೊಡುವುದಿಲ್ಲ, ಕೇಸರಿ ಬಣ್ಣಕ್ಕೆ ಕೊಡುತ್ತಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

- Advertisement -

ವಿಧಾನಸೌಧ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ರಾಜೀನಾಮೆಗೆ ಈ ಅಧಿವೇಶನ ನಡೆಯುವವರೆಗೂ ಅಹೋರಾತ್ರಿ ಧರಣಿ ನಡೆಸುತ್ತೇವೆ. ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದರೆ ಇಲ್ಲಿ ನಮ್ಮ ಧರಣಿ ಮೊಟಕುಗೊಳಿಸಿ ಜನರ ಮುಂದೆ ಹೋಗುತ್ತೇವೆ. ಸೋಮವಾರ ದಿನ ಎಲ್ಲಾ ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿ ಈಶ್ವರಪ್ಪನವರನ್ನು ಸಂಪುಟದಿಂದ ವಜಾ ಮಾಡಬೇಕು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಾರೆ ಎಂದರು. 



Join Whatsapp