ಕಾರಿಗೆ ಬಸ್ ಡಿಕ್ಕಿ: ಮದುವೆಗೆ ತೆರಳುತ್ತಿದ್ದ ನಾಲ್ವರು ಸಾವು

Prasthutha|

ತೆಲಂಗಾಣ: ಬಸ್ ವೊಂದು ಕಾರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ.

- Advertisement -

ಕುಂಭಂಪತಿ ಶ್ರೀನಿವಾಸ್ (48), ಸುಜಾತ (40), ರಮೇಶ್ (45) ಹಾಗೂ ಕಾರು ಚಾಲಕ ಚಂದ್ರುಪಟ್ಲ ಗ್ರಾಮದ ಕಲ್ಯಾಣ್ (26) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಶ್ರೀನಿವಾಸ್ ಅವರ ಅಣ್ಣನ ಮಗನ ಮದುವೆಗೆಂದು ಮಹಬೂಬಾಬಾದ್ ಜಿಲ್ಲೆಯ ನೆಕ್ಕೊಂಡ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಕ್ರೇನ್ ಸಹಾಯದಿಂದ ಮೃತದೇಹಗಳನ್ನು ಕಾರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.



Join Whatsapp