ಹಿಜಾಬ್ ಪರ ಹೋರಾಟಗಾರ್ತಿಗೆ ಜೀವ ಬೆದರಿಕೆ: ದೂರು ದಾಖಲು

Prasthutha|

ಬೆಳಗಾವಿ: ಹಿಜಾಬ್ ಪರ ಹೋರಾಟ ಮಾಡುತ್ತಿದ್ದ ಸಾಮಾಜಿಕ ಹೋರಾಟಗಾರ್ತಿಗೆ ವ್ಯಕ್ತಿಯೋರ್ವ ವಾಟ್ಸಪ್ ಕಾಲ್‌ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು  ನಗರ ಪೊಲೀಸ್​ ಆಯುಕ್ತರಿ​ಗೆ ದೂರು ನೀಡಲಾಗಿದೆ.

- Advertisement -

ವಾಟ್ಸಪ್ ಕಾಲ್‌ ಮಾಡಿ ಜೀವ ಬೆದರಿಕೆ ಹಾಕಲಾಗಿದ್ದು ಸಿಇಎನ್ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಮ್ ​​ದಾರ್‌ ಅವರು ದೂರು ನೀಡಿದ್ದಾರೆ.

ವಾಟ್ಸಪ್ ಕಾಲ್‌ ಮಾಡಿದ್ದ ಅಪರಿಚಿತ ವ್ಯಕ್ತಿ ‘ಹಿಜಾಬ್ ಹಿಜಾಬ್ ಅಂತಾ ಏನ್ ಹೇಳ್ತಿದ್ದೀಯಾ, ಆಜಾದಿ ಬೇಕಾ ನಿಮಗೆ? ನಮಗೆ ಆಜಾದಿ ಬೇಕು ಎಂದು ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೆಯುತ್ತೇವೆ ಎಂದು ಬೆದರಿಕೆ ಹಾಕಿದ್ದಲ್ಲದೇ, ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಾಟ್ಸಪ್ ವಾಯ್ಸ್ ಕಾಲ್ ಆಡಿಯೋವನ್ನು ಬೇರೆ ಮೊಬೈಲ್‌ ನಿಂದ ರೆಕಾರ್ಡ್ ಮಾಡಿಕೊಂಡು‌ ಪೊಲೀಸರಿಗೆ ದೂರು ನೀಡಿದ್ದಾರೆ.



Join Whatsapp