ಕೊಡಗು: ಶಿರವಸ್ತ್ರ ಧರಿಸಿದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ನಾಲ್ಕನೆಯ ದಿನವೂ ಶಾಲೆಗೆ ಪ್ರವೇಶ ನಿರಾಕರಣೆ

Prasthutha|

ಶಾಲೆಗೆ ಬರಬೇಡಿ, ಆನ್‌ ಲೈನ್ ತರಗತಿ ನೀಡಲಾಗುವುದೆಂದ ಶಿಕ್ಷಕರು?

- Advertisement -

ಮಡಿಕೇರಿ: ಶಿರವಸ್ತ್ರ ಧರಿಸಿ ಶಾಲೆಗೆ ಬಂದ 11 ವಿದ್ಯಾರ್ಥಿನಿಯರನ್ನು ನಾಲ್ಕನೆಯ ದಿನವೂ ಶಾಲೆಯ ಪ್ರವೇಶ ನಿರಾಕರಿಸಿದ ಘಟನೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಶಾಲೆಯಲ್ಲಿ ನಡೆದಿದೆ.

ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯ 11 ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರವೇಶ ನಿರ್ಬಂಧಿಸಲಾಗಿದ್ದು, ನಾಳೆಯಿಂದ ಶಾಲೆಗೆ ಬರಬೇಡಿ, ನಿಮಗೆ ಆನ್‌ ಲೈನ್ ತರಗತಿ ಮಾಡಲಾಗುವುದೆಂದು ಶಾಲೆಯ ಶಿಕ್ಷಕರು ನಿನ್ನೆ ದಿನ ಮೌಖಿಕವಾಗಿ ಹೇಳಿದ್ದಾರೆಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಇದರ ಬಗ್ಗೆ ಪೋಷಕರು ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

- Advertisement -

ಶಾಲೆ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲಾ ವಠಾರದಲ್ಲೇ ಕುಳಿತು ಕಲಿಯುತ್ತಿದ್ದಾರೆ. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.



Join Whatsapp