‘ಹಿಜಾಬಿ ಮುಸ್ಕಾನ್’ : ಮಂಡ್ಯದ ಮಗಳಿಗೆ ಸಾಥ್ ನೀಡಿದ ಕತಾರ್ ಸುಗಂಧ ದ್ರವ್ಯ ಕಂಪನಿ

Prasthutha|

ದೋಹಾ: ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಕತಾರ್ ನ ರಬ್ಬಾನಿ ಸುಗಂಧ ದ್ರವ್ಯ ಕಂಪನಿಯು ಬೆಂಬಲ ವ್ಯಕ್ತಪಡಿಸಿದೆ. ತಮ್ಮ ಕಂಪೆನಿಯ ಹೊಸ ಸುಗಂಧ ದ್ರವ್ಯ ಉತ್ಪನ್ನವನ್ನು ಕೇಸರಿ ಕಿರಾತಕರ ಮುಂದೆ ಕೆಚ್ಚೆದೆಯಿಂದ  ಅಲ್ಲಾಹು ಅಕ್ಬರ್ ಎಂದು ಕೂಗಿದ ಮಂಡ್ಯದ  ಮುಸ್ಕಾನ್ ಖಾನ್ ಹೆಸರಿನಲ್ಲಿ ಬಿಡುಗಡೆ ಮಾಡಿದೆ.

- Advertisement -

ಇದು ಕೇರಳ ಮೂಲದವರ ಮಾಲಕತ್ವದಲ್ಲಿ ಕತಾರ್ ನ  ದೋಹಾ ವನ್ನು ಕೇಂದ್ರೀಕರಿಸಿ ಕಾರ್ಯ ನಿರ್ವಹಿಸುತ್ತಿರುವ ಕಂಪೆನಿಯಾಗಿದ್ದು  ‘ಹಿಜಾಬಿ ಮುಸ್ಕಾನ್’  ಎಂಬ ಹೆಸರಿನಲ್ಲಿ ಸುಗಂಧ ದ್ರವ್ಯವನ್ನು ಹೊರ ತಂದಿದೆ.

“ಕೇಸರಿ  ರಾಜಕೀಯವನ್ನು ಸುಗಂಧದ ಮೂಲಕ ವಿರೋಧಿಸುವುದೇ ರಬ್ಬಾನಿ ಪರ್ಫ್ಯೂಮ್ಸ್ ನ ಧ್ಯೇಯವಾಗಿದ್ದು, ವ್ಯವಹಾರಗಳೆಲ್ಲವೂ ಅದರ ಬಳಿಕ”  ಎಂದು ಕಂಪನಿ ಹೇಳಿದೆ.

- Advertisement -

ಲಕ್ಷದ್ವೀಪದಲ್ಲಿ ಜಾರಿಗೆ ತರಲಾದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಲಕ್ಷದ್ವೀಪದ ಜನರಿಗೆ ಬೆಂಬಲವಾಗಿ ಕಂಪನಿಯು ಈ ಹಿಂದೆಯೂ  ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿತ್ತು.



Join Whatsapp