ಹಿಜಾಬ್ ಬೆಂಬಲಿಸಿ ದೆಹಲಿಯ ಕರ್ನಾಟಕ ಭವನಕ್ಕೆ ಮುತ್ತಿಗೆಗೆ ಯತ್ನ । ಹಲವು ವಿದ್ಯಾರ್ಥಿಗಳು ವಶಕ್ಕೆ

Prasthutha|

ನವದೆಹಲಿ: ಕರ್ನಾಟಕದ ಇತ್ತೀಚೆಗೆ ನಡೆದ ಸ್ಕಾರ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಹಿಜಾಬ್ ಬೆಂಬಲಿಸಿ ದೆಹಲಿಯ ಕರ್ನಾಟಕ ಭವನಕ್ಕೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

- Advertisement -

ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ ಕರ್ನಾಟಕ ಸರ್ಕಾರದ ನಡೆಯನ್ನು ವಿರೋಧಿಸಿ ಇಂದು ವಿದ್ಯಾರ್ಥಿಗಳು ದೆಹಲಿಯಲ್ಲಿರುವ ಕರ್ನಾಟಕ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಸದ್ಯ ಇಂದು ಹಿಜಾಬ್ ಕುರಿತು ವಿಚಾರಣೆಯು ಹೈಕೋರ್ಟ್ ವಿಸ್ತೃತ ಪೀಠ ನಡೆಯುತ್ತಿದ್ದು, ಹಿಜಾಬ್ ಗೆ ಸಂಬಂಧಿಸಿದ ತೀರ್ಪು ಯಾರ ಪರವಾಗಿ ಬರಲಿದೆ ಎಂದು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದಾರೆ



Join Whatsapp