ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಯುವತಿ !

Prasthutha|

ನೆಲಮಂಗಲ: ಯುವತಿಯೊಬ್ಬಳು, ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

- Advertisement -


ಸ್ವಾಮಿ ರಾಜ್ (50) ಕೊಲೆಗೀಡಾದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಕೊಲೆಗೈದ ಆರೋಪಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾ ಎಂದು ಗುರುತಿಸಲಾಗಿದೆ.


ಕೊಲೆಯಾದ ಸ್ವಾಮಿ ರಾಜ್ ಕಳೆದ 25 ವರ್ಷಗಳ ಹಿಂದೆ ಸತ್ಯಕುಮಾರಿ ಎಂಬವರನ್ನು ವಿವಾಹವಾಗಿದ್ದರು. ಆದರೆ ಈತನಿಗೆ 6 ವರ್ಷಗಳ ಹಿಂದೆ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ನೇತ್ರಾ ಪರಿಚಯವಾಗಿತ್ತು. ಬಳಿಕ ಅವರಿಬ್ಬರೂ ಮದುವೆಯಾದರು.
ತನ್ನ ಗಂಡ ಸ್ವಾಮಿ ರಾಜ್ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಮಾತ್ರವಲ್ಲ ಪರ ಪುರುಷರೊಂದಿಗೆ ಮಲಗುವಂತೆ ಬಲವಂತಪಡಿಸುತ್ತಿದ್ದ, ಇದರಿಂದ ಬೇಸತ್ತು ತಾನೇ ಕಬ್ಬಿಣದ ರಾಡ್ ನಿಂದ ಆತನ ಕೊಲೆ ಮಾಡಿರುವುದಾಗಿ ಮಾದನಾಯಕನಹಳ್ಳಿ ಪೊಲೀಸರ ಮುಂದೆ ನೇತ್ರಾ ಹೇಳಿಕೆ ನೀಡಿದ್ದಾಳೆ.

- Advertisement -


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.



Join Whatsapp