ಮಂಗಳೂರು: ಸರಗಳ್ಳತನ ಮಾಡುತ್ತಿದ್ದ ಏಳು ಜನರ ಬಂಧನ

Prasthutha|

ಮಂಗಳೂರು: ಮಹಿಳೆಯರ ಕುತ್ತಿಗೆಯಿಂದ ಸರ ಎಳೆದು ಪರಾರಿಯಾಗುತ್ತಿದ್ದ ಏಳು ಜನ ಸರಗಳ್ಳರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತರನ್ನು ಅಬ್ದುಲ್ ಇಶಾಮ್, ಸಪ್ವಾನ್, ಮೊಹಮ್ಮದ್ ತೌಸೀಪ್, ಅಬ್ದುಲ್ ಖಾದರ್ ಸಿನಾನ್, ಮೊಹಮ್ಮದ್ ಪಜಲ್, ಅರ್ಷಾದ್, ಮುಜಾಹಿದುರ್ ರೆಹಮಾನ್ ಎಂದು ಗುರುತಿಸಲಾಗಿದೆ.

13 ಸರಗಳ್ಳತನ, 5 ಸರಗಳ್ಳತನಕ್ಕೆ ಯತ್ನ, 3 ದ್ವಿಚಕ್ರ ವಾಹನ ಕಳ್ಳತನ, 2 ರಾಬರಿ, 1 ಪೊಲೀಸ್ ಹಲ್ಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಭಾಗಿಯಾಗಿದ್ದರು ಎಂದು ವರದಿಯಾಗಿದೆ. ಬಂಧಿತ ಆರೋಪಿಗಳಿಂದ 15 ಲಕ್ಷ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಲಾಗಿದೆ.

- Advertisement -

ಪೊಲೀಸರಿಗೆ ಯಾವುದೇ ಸುಳಿವು ಸಿಗದಂತೆ ಸಿ.ಸಿ ಕ್ಯಾಮರಾ ಇಲ್ಲದ ಕಡೆ ಕೃತ್ಯ ಎಸಗುತ್ತಿದ್ದ ಕಳ್ಳರು ಕದ್ದ ಬೈಕ್ ನ್ನೇ ಸರಗಳ್ಳತನಕ್ಕೆ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ನಡುವೆ ಸರಣಿ ಸರಗಳ್ಳತನ ಪ್ರಕರಣ ಭೇದಿಸಲು ವಿಶೇಷ ತಂಡ ರಚಿಸಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಪ್ರಕರಣ ಬೇದಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ನಗದು ಬಹುಮಾನ ನೀಡಿದ್ದಾರೆ.



Join Whatsapp