ಮಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ ವಕೀಲ ರಾಜೇಶ್ ಬಾರ್ ಕೌನ್ಸಿಲ್ ನಿಂದ ಅಮಾನತು

Prasthutha|

ಮಂಗಳೂರು: ಇಂಟರ್ನ್ ಶಿಪ್ ಗೆಂದು ಬಂದಿದ್ದ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನಗರದ ವಕೀಲ ಕೆಎಸ್ಎನ್ ರಾಜೇಶ್ ನನ್ನು ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಸೋಸಿಯೇಶನ್ ಅಮಾನತುಗೊಳಿಸಿದೆ.

- Advertisement -

ಈ ಕುರಿತು ಪ್ರಕಟಣೆ ಹೊರಡಿಸಿರುವ ಬಾರ್ ಕೌನ್ಸಿಲ್, ಮುಂದಿನ ಆದೇಶದವರೆಗೂ ನ್ಯಾಯಾಲಯದಲ್ಲಿ ವಕಾಲತ್ತು ಮಂಡಿಸದಂತೆ ಸೂಚನೆಯನ್ನು ನೀಡಿದೆ.

ಕಳೆದ ಸೋಮವಾರ (ಅಕ್ಟೋಬರ್ 18)ದಂದು ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಯುವತಿಯೊಬ್ಬಳು ತಾನು ಇಂಟರ್ನ್ ಶಿಪ್ ಗೆಂದು ವಕೀಲ ಕೆಎಸ್ಎನ್ ರಾಜೇಶ್ ಅವರ ಕಚೇರಿಗೆ ಹೋಗುತ್ತಿದ್ದು, ಆತ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿಯೂ ಹಾಗೂ ಬೆದರಿಕೆ ಒಡ್ಡಿದ್ದಾಗಿಯೂ ದೂರನ್ನು ದಾಖಲಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಕೆಎಸ್ಎನ್ ರಾಜೇಶ್ ಪತ್ತೆಗಾಗಿ ಎಸಿಪಿ ರಂಜಿತ್ ನೇತೃತ್ವದ ತಂಡವನ್ನು ರಚಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ.



Join Whatsapp