ಅಂಗಡಿಗೆ ‘ಶ್ರೀನಾಥ್ ದೋಸಾ ಕಾರ್ನರ್’ ಎಂದು ಹೆಸರು : ಮುಸ್ಲಿಮ್ ವ್ಯಾಪಾರಿ ಮೇಲೆ ಹಿಂದುತ್ವ ಗೂಂಡಾಗಳಿಂದ ಗಂಭೀರ ಹಲ್ಲೆ

Prasthutha|

ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿ ಬೀದಿಬದಿ ದೋಸೆ ಮಾರಾಟ ನಡೆಸುತ್ತಿದ್ದ ಮುಸ್ಲಿಮ್ ವ್ಯಾಪಾರಿಗೆ ಹಿಂದುತ್ವ ಗೂಂಡಾಗಳು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಆತ ತನ್ನ ಸ್ಟಾಲ್ ಗೆ ಶ್ರೀನಾಥ್ ದೋಸ ಕಾರ್ನರ್ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಮಥುರಾದ ವಿಕಾಸ್ ಬಝಾರ್ ನಲ್ಲಿ ಈ ಹಲ್ಲೆ ನಡೆದಿದೆ.

- Advertisement -

ಭಾರತದಲ್ಲಿ ಹಿಂದುತ್ವ ತೀವ್ರಗಾಮಿಗಳ ಗುಂಪು ವ್ಯಾಪಕವಾಗಿ ನಡೆಸುತ್ತಿರುವ ಹಿಂಸಾತ್ಮಕ ಕುಕೃತ್ಯವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸದಿರುವುದೇ ಈ ರೀತಿಯ ಘಟನೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.

ದೇವರಾಜ್ ಪಂಡಿತ್ ನೇತೃತ್ವದ ಹಿಂದುತ್ವದ ಗೂಂಡಾಗಳ ಗುಂಪು ಮುಸ್ಲಿಮ್ ವ್ಯಾಪಾರಿಯ ಮೇಲೆ ದಾಳಿ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸುತ್ತಿರುವ ಕುಕೃತ್ಯವನ್ನು ಆತ ವೀಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಫ್ಲೋಡ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ.

- Advertisement -

ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದ ವಿಷಯವನ್ನು ಮುಂದಿಟ್ಟುಕೊಂಡು ದೇವರಾಜ್ ಎಂಬಾತ ವ್ಯಾಪಾರಿಯೊಂದಿಗೆ ಜಗಳವಾಡುತ್ತಿರುವುದು ವೀಡಿಯೋದಲ್ಲಿ ತೋರಿಸಲಾಗಿದೆ. ಜಗಳ ತಾರತಕ್ಕೇರಿ ತನ್ನ ಆಹಾರ ಮಳಿಗೆಯನ್ನು ಶ್ರೀನಾಥ್ ದೋಸ ಕಾರ್ನರ್ ಬದಲು ಅಲ್ಲಾಹನ ಹೆಸರಿನೊಂದಿಗೆ ಬದಲಿಸುವಂತೆ ತಿಳಿಸಿ ಮುಸ್ಲಿಮ್ ವ್ಯಾಪಾರಿಗೆ ದೇವರಾಜ್ ಹಲ್ಲೆ ನಡೆಸಿದ್ದಾನೆ. ಹಿಂದುಗಳ ಮಳಿಗೆಯೆಂದು ಭಾವಿಸಿ ಹಿಂದೂಗಳು ಜಾಸ್ತಿಯಾಗಿ ಈ ಮಳಿಗೆಗೆ ಆಗಮಿಸುವುದರಿಂದ ಹೆಸರನ್ನು ಬದಲಿಸುವಂತೆ ತಿಳಿಸಿ ಆತ ಹಲ್ಲೆ ನಡೆಸಿದ್ದಾನೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ದೇವರಾಜ್ ಪಂಡಿತ್ ನ ಸಂಗಡಿಗರು ಕೃಷ್ಣನ ಭಕ್ತರು ಯುದ್ಧವನ್ನು ಪ್ರಾರಂಭಿಸಿ, ಮಥುರಾವನ್ನು ಶುದ್ಧೀಕರಿಸಿ ಎಂಬ ಘೋಷಣೆ ಮೊಳಗಿಸಿ ಬಡ ಮುಸ್ಲಿಮ್ ವ್ಯಾಪಾರಿಯ ದೋಸೆ ಮಳಿಗೆಯನ್ನು ಧ್ವಂಸ ಮಾಡಿದ್ದಾರೆ.

ಮುಸ್ಲಿಮ್ ವ್ಯಾಪಾರಿ ಆರ್ಥಿಕ ಜಿಹಾದ್ ನ ಮೂಲಕ ದೇಶದ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆಂದು ದೇವರಾಜ್ ಪಂಡಿತ್ ಆರೋಪಿಸಿದ್ದಾನೆ. ಸನಾತನ ಧರ್ಮದ ಅನುಯಾಯಿಗಳ ನೆರವಿನಿಂದ ವ್ಯಾಪಾರ ನಡೆಸಿ ಜೀವನ ನಡೆಸುವ ಇಂತಹ ವ್ಯಾಪಾರಿಗಳ ವಿರುದ್ಧ ದಂಗೆ ಏಳುವಂತೆ ಫೇಸ್ಬುಕ್ ವೀಡಿಯೋದಲ್ಲಿ ಹಿಂದುಗಳಿಗೆ ಆತ ಕರೆ ನೀಡಿದ್ದಾನೆ.

Join Whatsapp