ಮೀರತ್ : AIMIM ಕೌನ್ಸಿಲರ್ ಅನ್ನು ಗುಂಡಿಕ್ಕಿ ಹತ್ಯೆ

Prasthutha|

ಮೀರತ್: ಎಐಎಂಐಎಂ ನಾಯಕ ಮತ್ತು ಮುನ್ಸಿಪಲ್ ಕಾರ್ಪೋರೇಶನ್ ಕೌನ್ಸಿಲರ್ ಝುಬೇರ್ ಅನ್ಸಾರಿ ಅವರನ್ನು ಶನಿವಾರ ಅಪರಿಚಿತ ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಹತ್ಯೆಗೈದಿದ್ದಾರೆ.

- Advertisement -

ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಪಕ್ಷಕ್ಕೆ ಸೇರಿದ ಮೀರತ್ ಕಾರ್ಪೋರೇಶನ್ ನ ವಾರ್ಡ್ ಸಂಖ್ಯೆ 80 ರ ಕೌನ್ಸಿಲರ್ ಆಗಿದ್ದ ಅನ್ಸಾರಿಯವರನ್ನು ಮೀರತ್ ಜಿಲ್ಲೆಯ ನೌಚಂಡಿಯ ಸಂತೋಷ ಆಸ್ಪತ್ರೆಯ ಬಳಿ ಅವರ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನ್ಸಾರಿ ಬೆಳಗ್ಗಿನ ವಾಕಿಂಗ್ ಗೆ ತೆರಳಿದ್ದಾಗ ಎರಡು ಬೈಕಿನಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳ ತಂಡ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆಂದು ಮೀರತ್ ನ ಎಸ್.ಎಸ್.ಪಿ ಪ್ರಭಾಕರ್ ಚೌಧರಿ ತಿಳಿಸಿದ್ದಾರೆ. ಗುಂಡೇಟಿನಿಂದ ತೀವ್ರ ರೀತಿಯಲ್ಲಿ ಗಾಯಗೊಂಡ ಅನ್ಸಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಶವವನ್ನು ಮರಣೋತ್ತರ ಕಳುಹಿಸಲಾಗಿದೆ.

- Advertisement -

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆಯೆಂದು ಪ್ರಾಥವಿಕ ತನಿಖೆಯಿಂದ ಬಹಿರಂಗವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

Join Whatsapp