ಕೋವಿಡ್‌ ಪರಿಸ್ಥಿಯ ಲಾಭ ಪಡೆಯಲು ಅಲೋಪಥಿ ಬಗ್ಗೆ ಅವೈಜ್ಞಾನಿಕ ಹೇಳಿಕೆ; ಬಾಬಾ ರಾಮ್‌ ದೇವ್‌ ವಿರುದ್ಧ ಕ್ರಮಕ್ಕೆ ಐಎಂಎ ಆಗ್ರಹ

Prasthutha|

ನವದೆಹಲಿ : ಅಲೋಪತಿ ವೈದ್ಯ ಪದ್ಧತಿಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಯೋಗ ಗುರು ಬಾಬಾ ರಾಮ್‌ ದೇವ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒತ್ತಾಯಿಸಿದೆ. ರಾಮ್‌ ದೇವ್‌ ವಿರುದ್ಧ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಐಎಂಎ ಆಗ್ರಹಿಸಿದೆ.

- Advertisement -

ಬಾಬಾ ರಾಮ್‌ ದೇವ್‌ ಅಲೋಪತಿ ಬಗ್ಗೆ ತಿಳುವಳಿಕೆ ಇಲ್ಲದೇ ನೀಡುತ್ತಿರುವ ಹೇಳಿಕೆಗಳು ಸುಶಿಕ್ಷಿತ ಜನರಿಗೆ ಮತ್ತು ಅವರ ಬಲೆಗೆ ಬೀಳುತ್ತಿರುವ ಜನರಿಗೆ ಅಪಾಯವಿದೆ ಎಂದು ಐಎಂಎ ಹೇಳಿದೆ.

ಅಲೋಪತಿ ವೈದ್ಯಕೀಯ ವ್ಯವಸ್ಥೆ ಅವಿವೇಕಿ ವೈದ್ಯಕೀಯ ವಿಜ್ಞಾನ ಎಂದಿರುವ ರಾಮ್‌ ದೇವ್‌ ಹೇಳಿಕೆಯನ್ನು ಐಎಂಎ ಉಲ್ಲೇಖಿಸಿದೆ. ಜನರಲ್ಲಿ ಭಯ ಮೂಡಿಸಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಜನರಲ್ಲಿ ಭಯ, ಹತಾಶೆ ಮೂಡಿಸುವ ಮೂಲಕ ತಮ್ಮ ಅಕ್ರಮ ಹಾಗೂ ಅನುಮೋದನೆ ಇಲ್ಲದ ಔಷಧಗಳನ್ನು ಮಾರಾಟ ಮಾಡಿ ಹಣಗಳಿಸಬೇಕೆಂಬ ಉದ್ದೇಶವಿದೆ ಎಂದು ಐಎಂಎ ತಿಳಿಸಿದೆ.

Join Whatsapp