ಚನ್ನಪಟ್ಟಣದಿಂದ ಕಾಂಗ್ರೆಸ್‌ನ ಅವನತಿ ಆರಂಭವಾಗುತ್ತದೆ: ಎಚ್‌ಡಿಕೆ

Prasthutha|

- Advertisement -

ಹಾಸನ: ಕುಮಾರಸ್ವಾಮಿ ಮಗನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಏನು ಕುತಂತ್ರ ಮಾಡಿದರೂ ಅದು ಸಾಧ್ಯವಿಲ್ಲ ಎಂದು ಜನ ತೋರಿಸುತ್ತಾರೆ. ಚನ್ನಪಟ್ಟಣದಿಂದ ಅವರ ಅವನತಿ ಆರಂಭವಾಗುತ್ತೆ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಮಹಾ ಜನತೆ ಮತ್ತು ಕಾರ್ಯಕರ್ತರು ನಿಖಿಲ್ ಗೆ ಗೆಲುವು ನೀಡ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ವಿರೋಧಿಗಳು ಏನೇ ಕುತಂತ್ರ ಮಾಡಲಿ. ಕಾಂಗ್ರೆಸ್ ನ ಈಗಿನ ಅಭ್ಯರ್ಥಿ ಹಾಗೂ ಸಹೋದರರು ಪರಸ್ಪರ ಈ ಹಿಂದಿನ ಟೀಕೆಗಳನ್ನ ಜನರ ಮುಂದೆ ಮೊದಲು ಹಾಕಲಿ ಜನ ಮುಂದೆ ತೀರ್ಮಾನ ಮಾಡ್ತಾರೆ. ಚನ್ನಪಟ್ಟಣ ಚುನಾವಣೆ ದೇಶದ ಗಮನ ಸೆಳೆದಿದೆ. ವಿರೋಧಿಗಳ ಹೇಳಿಕೆ ಗಮನಿಸಿದ್ದೇನೆ. ಅವರ ಹೇಳಿಕೆಗೆ ಜನತೆ ಉತ್ತರ ಕೊಡ್ತಾರೆ ಎಂದರು.

- Advertisement -

ಬೆಂಗಳೂರು ಪರಿಸ್ಥಿತಿ ಒಂದೆಡೆಯಾದರೆ ರಾಜ್ಯದ ಇತರೆಡೆ ಜನರ ಬದುಕು ದಾರುಣವಾಗಿದೆ. ಮುಂಗಾರು ಉತ್ತಮ ಮಳೆ ಉತ್ತಮವಾಗಿದ್ದು ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿಗೂ ನೀರು ಬೀಡಲಾಗಿದೆ. ಈಗಲೂ ನೀರಿರುವುದು ರೈತರ ಅದೃಷ್ಟ ಎಂದರು.




Join Whatsapp