ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..!

Prasthutha|

ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜನ ಸಾಮಾನ್ಯರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

- Advertisement -

ಮನೆಯ ಗಾರ್ಡನ್‌ ಏರಿಯಾದಲ್ಲಿ ಹಲವಾರು ಜನರು ಬಂದು ಕುಳಿತಿರುವುದನ್ನು ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ.

ಮನೆಯ ಸ್ಪರ್ಧಿಗಳೆಲ್ಲ ಈ ರೀತಿ ಆಗಬಹುದು, ಇಷ್ಟೊಂದು ಜನ ಮನೆಯೊಳಗಡೆ ಬರಬಹುದು ಎಂದು ಅಂದುಕೊಂಡಿರಲಿಲ್ಲ. ಆದರೆ ಗಾರ್ಡನ್‌ ಏರಿಯಾದಲ್ಲಿ ಮೊದಲೇ ಕುರ್ಚಿಗಳನ್ನು ಜೋಡಿಸಿ ಇಡಲಾಗಿತ್ತು.

- Advertisement -

ಈ ವಾರ ದೊಡ್ಮನೆಯಲ್ಲಿ ಸ್ಪರ್ಧಿಗಳು ರಾಜಕೀಯ ಪಕ್ಷಗಳಾಗಿ ರೂಪುಗೊಂಡಿದ್ದಾರೆ. ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸ್ನೇನಾ ಪಕ್ಷ ಎಂದು ಎರಡು ಪಕ್ಷಗಳನ್ನು ರಚನೆ ಮಾಡಲಾಗಿದೆ.

ಒಂದು ಪಕ್ಷದ ಅಧ್ಯಕರಾಗಿ ಐಶ್ವರ್ಯಾ ಹಾಗೂ ಇನ್ನೊಂದು ಪಕ್ಷದ ಅಧ್ಯಕರಾಗಿ ತಿವಿಕ್ರಮ್ ಅವರು ಆಯ್ಕೆ ಆಗಿದ್ದಾರೆ. ಉಳಿದವರು‌ ಆಯಾ ಪಕ್ಷದ ಮುಖಂಡರಾಗಿ ಕಾಣಿಸಿಕೊಂಡಿದ್ದಾರೆ.



Join Whatsapp