ಹರಿಯಾಣದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್’ಗೆ ಸೋಲು: ಮೈತ್ರಿ ಪಕ್ಷವನ್ನೇ ಟೀಕಿಸಿದ ಶಿವಸೇನೆ

Prasthutha|

ಮುಂಬೈ: ಹರಿಯಾಣದಲ್ಲಿ ಸೋತ ಕಾಂಗ್ರೆಸ್ ಗೆ ಈಗ ಮಹಾರಾಷ್ಟ್ರದಲ್ಲಿ ಕಂಪನ ಆರಂಭವಾಗಿದೆ. ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಕಾಂಗ್ರೆಸ್ ನಿರ್ಧಾರವನ್ನು ಮೈತ್ರಿ ಪಕ್ಷ ಶಿವಸೇನೆ (ಯುಬಿಟಿ) ಟೀಕಿಸಿದೆ.

- Advertisement -


ಸಂಸದ ಸಂಜಯ್ ರಾವುತ್, ಕಾಂಗ್ರೆಸ್ ದೇಶಾದ್ಯಂತ ಏಕಾಂಗಿಯಾಗಿ ಹೋಗಲು ಬಯಸಿದರೆ ಉಳಿದವರು ಅವರ ರಾಜ್ಯಗಳಲ್ಲಿ ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳಲು ಸ್ವತಂತ್ರರು ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.


ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಮಿತ್ರಪಕ್ಷಗಳ ಬಗೆಗಿನ ಕಾಂಗ್ರೆಸ್ ಧೋರಣೆಯೇ ಕಾರಣ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬುಧವಾರ ಸಂಪಾದಕೀಯ ಬರೆದಿದೆ.

- Advertisement -


ಮುಂಬರುವ ವಿಧಾನಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆಯ ಬಗ್ಗೆ ಶಿವಸೇನೆ ಮತ್ತು ಕಾಂಗ್ರೆಸ್ ಮಧ್ಯೆ ನಡೆಯುತ್ತಿರುವ ಮಾತುಕತೆ ಸಮಯದಲ್ಲೇ ಈ ಸಂಪಾದಕೀಯ ಬಂದಿರುವುದು ವಿಶೇಷ.



Join Whatsapp