ಉಳಿತೊಟ್ಟು ಬಿಲಾಲ್ ಜುಮಾ ಮಸ್ಜಿದ್ ಇದರ ನೂತನ ಮಸೀದಿಯ ಶಂಕುಸ್ಥಾಪನೆ ನೆರವೇರಿಸಿದ ಮಾಣಿ ಉಸ್ತಾದ್

Prasthutha|

ನೆಲ್ಯಾಡಿ : ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ನ ನವೀಕರಣದ ಭಾಗವಾಗಿ ನೂತನ ಮಸ್ಜಿದ್ ನ ಶಂಕುಸ್ಥಾಪನೆ ಕಾರ್ಯಕ್ರಮ ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ನಡೆಯಿತು.

- Advertisement -

ಉಡುಪಿ, ಚಿಕ್ಕಮಗಳೂರು ಹಾಗು ಹಾಸನ ಜಿಲ್ಲೆಯ ಖಾಝಿಗಳು ಮಹಲ್ ಖಾಝಿಯು ಆಗಿರುವ ಬಹುಮಾನ್ಯ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನೇತೃತ್ವ ವಹಿಸಿದ್ದರು. 

ಕೆಜಿಎನ್ ದ ಅವಾ ಕಾಲೇಜು ಮಿತ್ತೂರು ಇದರ ಪ್ರಿನ್ಸಿಪಾಲ್ ಸಯ್ಯದ್ ಸ್ವಲಾಹುದ್ದೀನ್ ಜಮಲುಲೈಲಿ ಅಲ್-ಅದನಿ ಪೆರುಮುಗಮ್, ಉಳಿತೊಟ್ಟು ಬಿಲಾಲ್ ಜುಮ್ಮಾ ಮಸ್ಜಿದ್ ಖತೀಬ್ ಉಸ್ತಾದ್ ಅಬ್ದುಲ್ ರಝಾಕ್ ಸಖಾಫಿ, ಶಾಫಿ ಮರ್ಝೂಕಿ, ಉಳಿತೊಟ್ಟು ಮಸ್ಜಿದ್ ಅಧ್ಯಕ್ಷ ಶರೀಫ್ ತಾಜ್, ನೆಲ್ಯಾಡಿ ಬದ್ರಿಯಾ ಮಸ್ಜಿದ್ ಅಧ್ಯಕ್ಷರಾದ ಹನೀಫ್ ಸಿಟಿ, ಹೊಸಮಜಲು ಜಲಾಲಿಯ್ಯ ಮಸ್ಜಿದ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ PAK, ಉದ್ಯಮಿಗಳಾದ ರಫೀಕ್ ಸೀಗಲ್, ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಹಾಜಿ ಹಸನಬ್ಬ, ಹಾಜಿ ಉಮರಬ್ವ, ಹಾಜಿ ಯೂಸುಫ್ ದರ್ಖಾಸ್, ಇಸಾಕ್ ಮಂಗಳೂರು, ಕಾಂಟ್ರಾಕ್ಟರ್ ಅಬ್ಬಾಸ್ ಹೊಸಮಜಲು ಹಾಗು ಜಮಾಅತ್ ಭಾಂದವರು ಉಪಸ್ಥಿತರಿದ್ದರು.



Join Whatsapp