‘ಕೇಸ್‌ ನನ್ನನ್ನ ಕುಗ್ಗಿಸಿಲ್ಲ’: ‘ಬಿಗ್ ಬಾಸ್’ ಮನೆಗೆ ಕಾಲಿಟ್ಟ ಚೈತ್ರಾ ಕುಂದಾಪುರ

Prasthutha|

- Advertisement -

ಬೆಂಗಳೂರು: ‘ಬಿಗ್ ಬಾಸ್‌ ಕನ್ನಡ 11’ ಕಾರ್ಯಕ್ರಮದ 3ನೇ ಸ್ಪರ್ಧಿ ಯಾರು ಅಂತ ರಿವೀಲ್ ಆಗಿದೆ. ಮೊದಲ ಸ್ಪರ್ಧಿ ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್ ಆಗಿದ್ದರೆ, 2ನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್‌. ಇನ್ನೂ 3ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ‘ಬಿಗ್ ಬಾಸ್‌’ ಮನೆಯೊಳಗೆ ತೆರಳಿದ್ದಾರೆ.

ಬಿಗ್ ಬಾಸ್‌’ ಮನೆಯೊಳಗೆ ಕಾಲಿಡುವ ಮುನ್ನ ಚೈತ್ರಾ ಕುಂದಾಪುರ ಮಾತನಾಡಿದ್ದು, ‘’ನಾನು ಹಾಲು ಮಾರುವವನ ಮಗಳಾಗಿ ಹುಟ್ಟಿ ಈ ಮಟ್ಟಕ್ಕೆ ಬೆಳೆದಿದ್ದೇನೆ.

- Advertisement -

ದೊಡ್ಡ ದೊಡ್ಡ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಉಪ ಸಂಪಾದಕಿಯಾಗಿ, ಆಂಕರ್‌ ಆಗಿ ಕೆಲಸ ಮಾಡಿದ್ದೇನೆ.

ಹಿಂದುತ್ವ ನನ್ನ ರಕ್ತದಲ್ಲೇ ಇದೆ. ನನ್ನನ್ನ ಗಟ್ಟಿ ಮಾಡಿರೋದೇ ವಿರೋಧಿಗಳು. ನಾನು ಅರೆಸ್ಟ್ ಆಗಿದ್ದಾಗ ನನ್ನನ್ನ ನೋಡಲು ಉತ್ತರ ಕರ್ನಾಟಕದಿಂದ ಕಾರ್ಯಕರ್ತರು ಬಂದಿದ್ದರು. ಅವರಿಗೆಲ್ಲಾ ನಾನು ಚಿರಋಣಿ’’ ಎಂದಿದ್ದಾರೆ.

ಚೈತ್ರಾ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ಮೂಲದವರು.

2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಉದ್ಯಮಿ ಗೋವಿಂದ ಪೂಜಾರಿ ಕಣಕ್ಕಿಳಿಯಲು ಬಯಸಿದ್ದರು. ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿ ಗೋವಿಂದ ಪೂಜಾರಿಯಿಂದ ಚೈತ್ರಾ ಕುಂದಾಪುರ & ಟೀಮ್‌ ಕೋಟಿ ಕೋಟಿ ವಸೂಲಿ ಮಾಡಿದ್ದರು ಎಂಬ ಆರೋಪ ಕೇಳಿಬಂತು. ಅದೇ ಆರೋಪದ ಮೇಲೆ ಚೈತ್ರಾ ಕುಂದಾಪುರ ಅವರನ್ನ ಬಂಧಿಸಲಾಗಿತ್ತು. ಆನಂತರ ಜಾಮೀನಿನ ಮೇಲೆ ಚೈತ್ರಾ ಕುಂದಾಪುರ ಹೊರಬಂದರು. ‘‘ಕೇಸ್‌, ಕೋರ್ಟ್, ಕಾನೂನು ನನ್ನನ್ನ ಕುಗ್ಗಿಸಿಲ್ಲ’’ ಅಂತ್ಹೇಳಿ ‘ಬಿಗ್ ಬಾಸ್’ ಮನೆಯೊಳಗೆ ಕಾಲಿಟ್ಟಿದ್ದಾರೆ ಚೈತ್ರಾ ಕುಂದಾಪುರ



Join Whatsapp