ಮರ್ಕಝ್ ನಾಲೆಡ್ಜ್ ಸಿಟಿ ಮೀಂ ಕವಿಗೋಷ್ಟಿಗೆ ಸಫ್ವಾನ್ ಅಳಕೆಗೆ ಆಹ್ವಾನ

Prasthutha|

ಮಂಗಳೂರು: ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವ ನೀಡುವ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಸಪ್ಟೆಂಬರ್ 28,29 ರಂದು ನಡೆಯಲಿರುವ ‘ಮೀಂ ಕವಿಗೋಷ್ಟಿ’ ಗೆ ಕರ್ನಾಟಕದ ಯುವ ಬರಹಗಾರ, ಕವಿ ಸಫ್ವಾನ್ ಸಅದಿ ಅಳಕೆ ಆಯ್ಕೆಯಾಗಿದ್ದಾರೆ.

- Advertisement -

ಪೈಗಂಬರ್ ಮುಹಮ್ಮದರ ಜನ್ಮದಿನದ ಅಂಗವಾಗಿ ವರ್ಷಂಪ್ರತಿ ನಾಲೆಡ್ಜ್ ಸಿಟಿಯಲ್ಲಿ ನಡೆಯುವ ಈ ಕವಿಗೋಷ್ಟಿಯಲ್ಲಿ ದೇಶದ ನಾನಾ ಭಾಗಗಳಿಂದ ಕವಿಗಳು ಭಾಗವಹಿಸುತ್ತಿದ್ದು ಬಹುಭಾಷಾ ಕವಿಗೋಷ್ಟಿ ಜರಗುತ್ತದೆ. ಈ ಕವಿಗೋಷ್ಟಿಗೆ ಸಫ್ವಾನ್ ರವರ ‘ಪ್ರವಾದಿಯ ಮಾದರಿ ಬದುಕು’ ಎಂಬ ಕವನ ಆಯ್ಕೆಯಾಗಿದ್ದು ಅವರು ಕವನ ವಾಚಿಸಲಿದ್ದಾರೆ.

ಪೇರಮೊಗರು ಮುದರ್ರಿಸ್ ಶೈಖುನಾ ಶರಫುದ್ದೀನ್ ಸಅದಿಯ ಶಿಷ್ಯರಾದ ಸಫ್ವಾನ್, ಈ ಹಿಂದೆ ಹಲವಾರು ಕವಿಗೋಷ್ಟಿಯಲ್ಲಿ ಭಾಗವಹಿಸಿ ಪ್ರಶಸ್ತಿ ಭಾಜನರಾಗಿದ್ದು ಪ್ರಸ್ತುತ ಮದ್ರಸಾ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



Join Whatsapp