ಡಿ.ಕೆ ಶಿವಕುಮಾರ್‌’ಗೆ ಸಿಎಂ ಆಗುವ ಅವಕಾಶ ಬರಲಿದೆ: ಶಾಸಕ ಬಸವರಾಜ್ ಶಿವಗಂಗಾ

Prasthutha|

ದಾವಣಗೆರೆ: ಇದೇ ಅವಧಿಯಲ್ಲಿ ಡಿ.ಕೆ ಶಿವಕುಮಾರ್‌ ಗೆ ಸಿಎಂ ಆಗುವ ಅವಕಾಶ ಬರಲಿದೆ ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಈಗ ಸಿಎಂ ಆಗುವ ಪಪೋಟಿ ಇಲ್ಲ. ಸಿದ್ದರಾಮಯ್ಯನವರಿಗೆ 136 ಶಾಸಕರು ನೈತಿಕವಾಗಿ ಬೆಂಬಲ ನೀಡುತ್ತೇವೆ. ಆದರೆ ಡಿ.ಕೆ ಶಿವಕುಮಾರ್ ಸಿಎಂ ಆಗುವ ಅವಕಾಶ ಬರಲಿದೆ. ಅದು ಯಾರಿಗೋ ನೋವು ಕೊಟ್ಟು ಸಿಎಂ ಆಗುವಂತಹ ಸಂದರ್ಭ ಅಲ್ಲ ಎಂದಿದ್ದಾರೆ.

ಡಿಕೆಶಿ ಸಿಎಂ ಆಗೋದು ಖಚಿತ, ಮೊದಲಿನಿಂದಲೂ ನಾನು ಇದನ್ನು ಹೇಳುತ್ತಿದ್ದೇನೆ. ಆ ಮಾತಿಗೆ ನಾನು ಬದ್ಧನಾಗಿದ್ದೇನೆ. ಆದರೆ ಈ ಸಂದರ್ಭದಲ್ಲಿ ಬೇಡ ಎಂದು ಅವರು ಹೇಳಿದ್ದಾರೆ.



Join Whatsapp