ಶಾಲಾ ವಾಹನ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ: ಬೆಚ್ಚಿಬಿದ್ದ ಮಕ್ಕಳು..!

Prasthutha|

ಬೆಂಗಳೂರು: ಶಾಲಾ ಮಕ್ಕಳಿದ್ದ ಬಸ್ ಚಾಲಕನನ್ನ ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ಬಳಿ ನಡೆದಿದೆ.

- Advertisement -

ನಿನ್ನೆ ಸಂಜೆ 3.45ರ ಸುಮಾರಿಗೆ ಮಕ್ಕಳನ್ನ ಡ್ರಾಪ್ ಮಾಡಿಲು ಶಾಲೆಯಿಂದ ಹೊರಟಿದ್ದ ಶಾಲಾ ಬಸ್​ಗೆ ಸ್ಕಾರ್ಪಿಯೊ ಕಾರಿನಿಂದ ಅಡ್ಡಕಟ್ಟಿ ನಾಲ್ಕೈದು ಯುವಕರು ಬಸ್​ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಟಿರ್ಮಿಶ್​​ ಶಾಲೆಗೆ ಸೇರಿದ ಶಾಲಾ ಬಸ್ ಮೇಲೆ ಸೋಮವಾರ ಮಧ್ಯಾಹ್ನ ವ್ಯಕ್ತಿಗಳ ಗುಂಪು ದಾಳಿ ಮಾಡಿ ಚಾಲಕ ಜೇಮ್ಸ್ ಧೋನ್ ಎಂಬುವವನ ಮೇಲೆ ಹಲ್ಲೆ ನಡೆಸಲಾಗಿದೆ. ಇನ್ನು ಈ ಘಟನೆಗೆ ಕಾರಣ ಸೈಡ್ ಬಿಡದಿರುವುದು. ಕಿಡಿಗೇಡಿಗಳ ಕಾರಿಗೆ ಸೈಡ್​ ಕೊಡದಿದ್ದಕ್ಕೆ ಶಾಲಾ ಬಸ್ ಅಡ್ಡಹಾಕಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ.

- Advertisement -

ಶಾಲಾ ಬಸ್​ನಲ್ಲಿದ್ದ ಮಕ್ಕಳು ಹೆದರಿ ಕಿರುಚಾಡಿಕೊಂಡಿದ್ದಾರೆ. ಸದ್ಯ ಚಾಲಕ ಜೇಮ್ಸ್ ಧೋನ್ ಅವರು ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.



Join Whatsapp