ಮಧ್ಯಪ್ರದೇಶ | ಭಾರತದಲ್ಲಿ ವಾಸಿಸಬೇಕಾದರೆ ರಾಮ, ಕೃಷ್ಣರಿಗೆ ಜೈ ಎನ್ನಬೇಕು: ಸಿಎಂ ಮೋಹನ್ ಯಾದವ್

Prasthutha|

ಮಧ್ಯಪ್ರದೇಶ: ಭಾರತದಲ್ಲಿ ವಾಸಿಸಲು ಬಯಸುವ ಎಲ್ಲರೂ ಹಿಂದೂ ದೇವರಾದ ರಾಮ ಮತ್ತು ಕೃಷ್ಣನಿಗೆ ಜೈ ಎನ್ನಬೇಕು” ಎಂದು ಹೇಳುವ ಮೂಲಕ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೊಸ ವಿವಾದ ಸೃಷ್ಟಿಸಿದ್ದಾರೆ.

- Advertisement -

ಅಶೋಕನಗರ ಜಿಲ್ಲೆಯ ಚಂಡೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಧ್ಯಪ್ರದೇಶ ಸಿಎಂ, “ತಮ್ಮ ಧರ್ಮವನ್ನು ಅನುಸರಿಸುವ ಅವಕಾಶವು ಎಲ್ಲ ಧರ್ಮದವರಿಗೂ ಇದೆ. ಆದರೆ ಅವರು ದೇಶಭಕ್ತರಾಗಿರಬೇಕು” ಎಂದು ಹೇಳಿದರು.

“ಭಾರತವು ಹಿಂದೂ ಮುಸ್ಲಿಂ ಎಂದು ಪ್ರತ್ಯೇಕ ಮಾಡಲ್ಲ. ಆದರೆ ಜನರು ದೇವರು, ಸೃಷ್ಟಿ, ಬ್ರಹ್ಮಾಂಡವನ್ನು ತಿಳಿಯುವುದು ಮುಖ್ಯ. ರಹೀಮ್ ಹಾಗೂ ರಾಸ್ ಖಾನ್ (ಹಿಂದೂ ದೇವರ ಗುಣಗಾನ ಮಾಡಿದ್ದ ಮಧ್ಯಕಾಲೀನ ಭಾರತದ ಕವಿ ಹಾಗೂ ಸಂತರು) ಇದೇ ನೆಲದಲ್ಲಿ ಜನಿಸಿದವರು” ಎಂದೂ ಈ ವೇಳೆ ಹೇಳಿದರು.

- Advertisement -



Join Whatsapp