ಭರತ್ ಶೆಟ್ಟಿ ಮೆದುಳು ಪಾಕಿಸ್ತಾನದಲ್ಲಿದೆ, ಅಡ್ಡೂರು ಗ್ರಾಮ ಮಂಗಳೂರಿನಲ್ಲಿದೆ: ಕೆ.ಅಶ್ರಫ್

Prasthutha|

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಶಾಸಕ ಡಾ. ಭರತ್ ಶೆಟ್ಟಿ ಯವರ ದೇಹ ಭಾರತದಲ್ಲಿ ಇದ್ದು, ಮೆದುಳು ಮಾತ್ರ ಪಾಕಿಸ್ತಾನದಲ್ಲಿ ಇದೆ. ಇತ್ತೀಚೆಗೆ ಮಂಗಳೂರಿನ ಅಡ್ಡೂರು ಪ್ರದೇಶವನ್ನು ಭರತ್ ಶೆಟ್ಟಿ ಮಿನಿ ಪಾಕಿಸ್ತಾನ ಎಂದು ಸಂಭೋಧಿಸಿರುವುದು ದೇಶ ದ್ರೋಹದ ಹೇಳಿಕೆ. ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಬೇಕು ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಭರತ್ ಶೆಟ್ಟಿಯವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಅಧಿಕವಾಗಿದ್ದು, ತನ್ನ ಕ್ಷೇತ್ರದ ಕಂದಾಯ ಗ್ರಾಮವಾದ ಅಡ್ಡೂರು ಎಂಬ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆಯುವುದು ಅವರಿಗೆ ಬಹುಷ್ಯ ಪೆಗ್ ಏರಿಸುವಷ್ಟು ನಶೆ ಸೃಷ್ಟಿ ಆಗುತ್ತದೆ ಎಂದು ನಂಬಬೇಕಿದೆ. ಭರತ್ ಶೆಟ್ಟಿಯ ಮೆದುಳು ಪಾಕಿಸ್ತಾನದಲ್ಲಿ ಇರುವುದರಿಂದ ಶಾಸಕರು ತನ್ನ ಕ್ಷೇತ್ರದ ಜನರನ್ನು ಭಯಗೊಳಿಸುವ ಉದ್ದೇಶದಿಂದ ತನ್ನ ನೈಜ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದರು.

ಅಡ್ಡೂರು ಗ್ರಾಮಸ್ಥರ ತೆರಿಗೆಯಿಂದ ತನ್ನ ವೇತನ ಪಡೆಯುವ ಭರತ್ ಶೆಟ್ಟಿ , ಅಡ್ಡೂರು ಪ್ರದೇಶದ ಜನರು ಚಲಾವಣೆ ಗೊಳಿಸುವ  ಕರೆನ್ಸಿ ನೋಟುಗಳು ಯಾವ ದೇಶದ್ದು ಎಂದು ಭರತ್ ಶೆಟ್ಟಿಯ ಮೆದುಳು ವಿವೇಚಿಸಿ ಹೇಳಲಿ. ಭರತ್ ಶೆಟ್ಟಿ ಇನ್ನಾದರೂ ತನ್ನ ಮೆದುಳನ್ನು ಪಾಕಿಸ್ತಾನದಿಂದ ಮಂಗಳೂರಿಗೆ ಟ್ರಾಸ್ಪ್ಲಾಂಟ್ ಗೊಳಿಸಿ ಮಂಗಳೂರು ಉತ್ತರ  ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp