ಶಾಸಕ ಹರೀಶ್ ಪೂಂಜ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ: ಭಾಸ್ಕರ್ ಪ್ರಸಾದ್

Prasthutha|

- Advertisement -

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಅತ್ಯಂತ ತುಚ್ಚವಾಗಿ ನಿಂದನೆ ಮಾಡಿ ದೇಶದ್ರೋಹದ ಕೃತ್ಯವನ್ನು ಎಸಗಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ವಿರುದ್ಧ ಸುಮೋಟೋ ಕೇಸ್ ದಾಖಲಿಸಿ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ
ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಸರ್ಕಾರದ ವತಿಯಿಂದ ಬೆಳ್ತಂಗಡಿಯ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಅತ್ಯಂತ ತುಚ್ಚವಾಗಿ ನಿಂದನೆ ಮಾಡಿ ದೇಶದ್ರೋಹದ ಕೃತ್ಯವನ್ನು ಎಸಗಿದ್ದಾನೆ. ಇದು ಸಾಲದೆಂಬಂತೆ, ಶಾಲಾ ಮಕ್ಕಳನ್ನು ಕೂರಿಸಿಕೊಂಡು ಭಾರತ ಮತ್ತು ಪಾಕಿಸ್ತಾನ ವಿಭಜನೆ ಹಾಗೂ ಬಾಂಗ್ಲಾದೇಶದ ಜನಾಂಗೀಯ ದ್ವೇಷಗಳ ಬಗ್ಗೆ ಮಾತನಾಡಿ, ಅದರಡಿಯಲ್ಲಿ ಭಾರತದಲ್ಲಿ ಕೋಮು ದ್ವೇಷವನ್ನ ಸೃಷ್ಟಿಸುವ ಮತ್ತು ಜನಾಂಗೀಯ ದ್ವೇಷವನ್ನ ಬೆಳೆಸುವ ಮತ್ತು ಆ ಮೂಲಕ ಭಾರತದ ಆಂತರಿಕ ಭದ್ರತೆಗೆ ಆತಂಕವನ್ನು ಉಂಟುಮಾಡುವಂತಹ ದೇಶದ್ರೋಹದ ಅಪರಾಧವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಇವರು ಬೆಳ್ತಂಗಡಿಯ ತಾಲೂಕು ದಂಡಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರೆ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿಯೇ ದುರುದ್ದೇಶ ಪೂರ್ವಕವಾಗಿ ಮಾತನಾಡುತ್ತಾ ಕರಾವಳಿ ಭಾಗದಲ್ಲಿ ಶಾಲಾ ಮಕ್ಕಳ ಮನಸ್ಸಿನಲ್ಲಿ ಕೋಮು ದ್ವೇಷದ ದಳ್ಳುರಿಯನ್ನು ಬಿತ್ತುವ ಮೂಲಕ ನಾಡಿನ ಶಾಂತಿ ಮತ್ತು ಸುವ್ಯವಸ್ಥೆಗೆ ಮತ್ತು ದೇಶದ ಆಂತರಿಕ ಭದ್ರತೆಗೆ ಆತಂಕ ವಾಗುವ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ತಮ್ಮ ಸರ್ಕಾರವು ನಿಜವಾಗಿಯೂ ಈ ನಾಡಿನ ಕಾನೂನಿಗೆ ಗೌರವ ಕೊಟ್ಟು ಈ ನೆಲದ ಸಂವಿಧಾನವನ್ನ ತಾವುಗಳು ಗೌರವಿಸುವುದೇ ಆದಲ್ಲಿ ಶಾಸಕ ಹರೀಶ್ ಪೂಂಜನ ವಿರುದ್ಧ ಸುಮೋಟೋ ಕೇಸ್ ಅನ್ನು ಕೂಡಲೇ ದಾಖಲಿಸಿಕೊಳ್ಳಲು ಪೋಲಿಸ್ ಇಲಾಖೆಗೆ ಆದೇಶ ನೀಡಿ ನ್ಯಾಯವನ್ನ ಎತ್ತಿ ಹಿಡಿಯಬೇಕೆಂದು ಹೇಳಿದ್ದಾರೆ.



Join Whatsapp