ನನಗೆ ಕಾರು, ಗನ್ ಮ್ಯಾನ್ ಕೊಟ್ಟಿಲ್ಲ, ಏನಾದ್ರೂ ಆದ್ರೆ ಸರ್ಕಾರವೇ ಹೊಣೆ: ಛಲವಾದಿ ನಾರಾಯಣಸ್ವಾಮಿ

Prasthutha|

ಬೆಂಗಳೂರು: ನಾನು ವಿಪಕ್ಷ ನಾಯಕನಾಗಿ 20 ದಿನಗಳು ಕಳೆದಿವೆ. ನನಗೆ ಇನ್ನೂ ಕಾರು ಬಂದಿಲ್ಲ, ಗನ್ ಮ್ಯಾನ್ ಕೊಟ್ಟಿಲ್ಲ ಎಂದು ಪರಿಷತ್ ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ನನಗೆ ಸರ್ಕಾರಿ ಮನೆ ಕೊಟ್ಟಿಲ್ಲ. ಕೇವಲ ಒಬ್ಬ ಗನ್ ಮ್ಯಾನ್ ನೀಡಿದ್ದಾರೆ. ಬೆಂಗಾವಲು ಪಡೆ ನೀಡುವಂತೆ ಡಿಐಜಿಗೆ ಪತ್ರ ಬರೆದಿದ್ದೇನೆ. ಸಭೆ ಮಾಡಿ ಪರಿಶೀಲಿಸುವುದಾಗಿ ಅವರು ತಿಳಿಸಿದ್ದಾರೆ. ನನಗೆ ಗನ್ ಮ್ಯಾನ್, ಕಾರು ಯಾವುದೂ ಬೇಡ. ಕೊಟ್ಟಿರುವ ಒಬ್ಬ ಗನ್ ಮ್ಯಾನ್ನನ್ನೂ ವಾಪಸ್ ಕಳುಹಿಸುತ್ತೇನೆ’ ಎಂದರು.


‘ನನ್ನ ಸ್ಥಾನಮಾನಕ್ಕೆ ತಕ್ಕಂತೆ ಶಿಷ್ಟಾಚಾರ ಪಾಲಿಸಿಲ್ಲ. ಹೀಗಾಗಿ, ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದು ಹೇಳಿದರು

- Advertisement -


‘ನನ್ನ ಹಕ್ಕಿಗೆ ಚ್ಯುತಿಯಾದರೆ ಯಾರು ಹೊಣೆ? ನನ್ನ ಮೇಲೆ ಹಗೆತನ ಯಾಕೆ? ನನಗೆ ಕೊಡಬೇಕಾದ ಸವಲತ್ತು ನೀಡಲು ಯಾವಾಗ ಸಭೆ ನಡೆಸುತ್ತೀರಿ? ಇದೆಲ್ಲವನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ’ ಎಂದರು.



Join Whatsapp