ಇರ್ವತ್ತೂರು ಪದವು: ಯಶಸ್ವಿ ಚಾರಿಟೇಬಲ್ ಟ್ರಸ್ಟ್(ರಿ) ಆಸ್ತಿತ್ವಕ್ಕೆ

Prasthutha|

ಬಂಟ್ವಾಳ ,ಇರ್ವತ್ತೂರು ಪದವು: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ದಲ್ಲಿ ಸಹಾಯ ಮಾಡುವ ಉದ್ದೇಶದಿಂದ ಅನಿವಾಸಿ ಉದ್ಯಮಿ ನಾಸಿರ್ ಹುಸೈನ್ ಕಲಾಬಾಗಿಲು, ಸಮಾಜ ಸೇವಕ,ಸಂಘಟನಾ ಚತುರ ಎಸ್.ಪಿ.ರಫೀಕ್ ರವರ ಸಾರಥ್ಯದಲ್ಲಿ ದಿನಾಂಕ 05 ಆಗಷ್ಟ್ 2024 ರಂದು ಯಶಸ್ವಿ ಚಾರಿಟೇಬಲ್ ಟ್ರಸ್ಟ್(ರಿ) ಆಸ್ತಿತ್ವಕ್ಕೆ ಬಂತು.

- Advertisement -

ಇದರ ಪ್ರಪ್ರಥಮ ಸಭೆಯು ದಿನಾಂಕ 09 ಆಗಷ್ಟ್ 2024ರಂದು ನಾಸಿರ್ ಹುಸೈನ್ ಕಲಾಬಾಗಿಲು ರವರ ಘನ ಅಧ್ಯಕ್ಷತೆಯಲ್ಲಿ, ಬಿ.ಜೆ.ಎಂ ಇರ್ವತ್ತೂರು ಪದವು ಮಸೀದಿಯ‌ ಖತೀಬರಾದ ಗೌರವಾನ್ವಿತ ಉಮರ್ ಮದನಿಯವರ ದುಆ ಮತ್ತು ರಫೀಕ್ ಮದನಿಯವರ ಹಿತವಚನಗಳೊಂದಿಗೆ ಇರ್ವತ್ತೂರಿನ ಎಸ್.ಪಿ.ಕಾಟ್ಟೇಜ್ ನಲ್ಲಿ ನಡೆಯಿತು.

ಪ್ರಪ್ರಥಮ 2024-2027ರ ಅವಧಿಗೆ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.
ಗೌರವ ಅಧ್ಯಕ್ಷರು: ನಾಸಿರ್ ಹುಸೈನ್ ಕಲಾಬಾಗಿಲು
ಗೌರವ ಸಲಹೆಗಾರರು : ಅಮೀನ್ ಪಂಜೋಡಿ ಮತ್ತು ಎಸ್.ಪಿ.ಸಲೀಂ
ಅಧ್ಯಕ್ಷರು :ಎಸ್ ಪಿ ರಫೀಕ್
ಉಪಾಧ್ಯಕ್ಷರು:ಮುಹಮ್ಮದ್ ಝಹೀರ್ ಎಡ್ತೂರ್ & ಫರೀದ್ ಅಹ್ಮದ್ ಎಡ್ತೂರ್
ಪ್ರಧಾನ ಕಾರ್ಯದರ್ಶಿ: ಸಿದ್ದಿಕ್ ಕಲಾಬಾಗಿಲು
ಉಪಕಾರ್ಯದರ್ಶಿ: ನಿಸಾರ್ ಬಿ.ಎಸ್.ನಗರ
ಕೋಶಾಧಿಕಾರಿ: ನಯಾಝ್ ಕಲಾಬಾಗಿಲು
ಹಾಗೂ ಟ್ರಸ್ಟ್ ನ ಕಾರ್ಯಕಾರಿಣಿ ಸಮೀತಿಯ ಸದಸ್ಯರಾಗಿ
ಅಬ್ದುಲ್ ರಝಾಕ್ ಕಲಾಬಾಗಿಲು (ದುಬೈ),ಸುಲೈಮಾನ್ ಅಗಲೋಡಿ,ಹಾಮದ್ ಅಗಲೋಡಿ,ಹಂಝ‌ ಅಗಲೋಡಿ ,ಪಿ.ಎಚ್.ಅಬ್ಬಾಸ್ ಇರ್ವತ್ತೂರು ಪದವು ,ಅಶ್ರಫ್ ಸುಪಾರಿ ಇರ್ವತ್ತೂರು ಪದವು,ಮನ್ಸೂರ್ ಇರ್ವತ್ತೂರು ಪದವು (ದುಬೈ),ಎಸ್.ಎಮ್.ವಸೀಂ ವಾಮದ ಪದವು,ನಿಸಾರ್ ಕಲಾಬಾಗಿಲು(ದುಬೈ),
ಝಾಕಿರ್ ಹುಸೈನ್ ZZZ ಇರ್ವತ್ತೂರು ಪದವು ,ನಿಸಾರ್ ಅಹ್ಮದ್ ಮಾಸ್ಟರ್ ಇರ್ವತ್ತೂರು ಪದವು ,ಝಹೀರ್ ZZZ ಇರ್ವತ್ತೂರು ಪದವು,ಅಝರ್ ಪಂಜೋಡಿ ಮತ್ತು ಝಮೀರ್ ಇರ್ವತ್ತೂರು ಪದವು ಇವರು ಆಯ್ಕೆ ಯಾದರು.

- Advertisement -

ಅನಿವಾಸಿ ಉದ್ಯಮಿ ನಾಸಿರ್ ಕಲಾಬಾಗಿಲು ಪ್ರಸ್ತಾವಿಕವಾಗಿ ಮಾತನಾಡಿದರು.ಸಿದ್ದೀಕ್ ಕಲಾಬಾಗಿಲು ಎಲ್ಲರನ್ನೂ ಸ್ವಾಗತಿಸಿ, ಪ್ರಪ್ರಥಮ ಸಭೆಯ ಪ್ರಕ್ರಿಯೆಯನ್ನು ನಡೆಸಿದರು.ನಿಸಾರ್ ಬಿ.ಎಸ್.ನಗರ ಇವರ ಧನ್ಯವಾದಗಳೊಂದಿಗೆ ಪ್ರಪ್ರಥಮ ಸಭೆಯು ಮುಕ್ತಾಯಗೊಂಡಿತು.



Join Whatsapp