ತುಂಗಭದ್ರಾ ಡ್ಯಾಂನ ರಾಜ್ಯ ಸರ್ಕಾರ ಕಂಟ್ರೋಲ್ ಮಾಡಲ್ಲ: ಡಿ.ಕೆ ಶಿವಕುಮಾರ್

Prasthutha|

ಬೆಂಗಳೂರು: ತುಂಗಭದ್ರಾ ಜಲಾಶಯವನ್ನು ರಾಜ್ಯ ಸರ್ಕಾರ ಕಂಟ್ರೋಲ್ ಮಾಡಲ್ಲ. ಅದಕ್ಕೇ ಆದ ಪ್ರತ್ಯೇಕ ಸಮಿತಿಯಿದೆ. ನಾವು ಸದಸ್ಯರು ಅಷ್ಟೇ. ಆದರೂ ಅದು ನಮ್ಮದೇ. ಇನ್ನೂ 4-5 ದಿನಗಳಲ್ಲಿ ಗೇಟ್ ರಿಪೇರಿ ಮಾಡುವ ಕೆಲಸ ಆಗುತ್ತದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅಭಯ ನೀಡಿದರು.

- Advertisement -


ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಬಿ ಡ್ಯಾಮ್ ಗೆ ಹೋಗಿ ವೀಕ್ಷಣೆ ಮಾಡಿ, ಕೂಡಲೇ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲಾ ಗುತ್ತಿಗೆದಾರರ ಜೊತೆ ಮಾತಾಡಿದ್ದೇನೆ. ಡಿಸೈನ್ ಗಳನ್ನ ಕಳಿಸಿಕೊಟ್ಟಿದ್ದೇವೆ ಎಂದರು.


ಇನ್ನೂ 4-5 ದಿನಗಳಲ್ಲಿ ರಿಪೇರಿ ಕೆಲಸ ಆಗುತ್ತೆ. ರೈತರ ಬೆಳೆ ಉಳಿಸುವ ವ್ಯವಸ್ಥೆ ಮಾಡಿದ್ದೇವೆ. ನಾಳೆ (ಆ.13) ನಮ್ಮ ಸಿಎಂ ಹೋಗ್ತಾರೆ. ನಾನು ಟೆಕ್ನಿಕಲ್ ಟೀಮ್ ಜೊತೆಗೆ ಚರ್ಚೆ ಮಾಡಿದ್ದೇನೆ. ಯಾರೂ ಗಾಬರಿ ಪಡಬೇಕಿಲ್ಲ ಎಂದು ಅಭಯ ನೀಡಿದರು.



Join Whatsapp