ಬೆಳ್ತಂಗಡಿ | ನೂತನ ಪ್ರವಾಸಿ ಬಂಗಲೆ ನಿರ್ಮಾಣದಲ್ಲಿ ಭ್ರಷ್ಟಾಚಾರ: ರಕ್ಷಿತ್ ಶಿವರಾಮ್ ಆರೋಪ

Prasthutha|

- Advertisement -

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರವಾಸಿ ಬಂಗಲೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಆರೋಪಿದರು.

ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯ ಸಂದರ್ಭ ತರಾತುರಿನಲ್ಲಿ ಉದ್ಘಾಟನೆ ನಡೆಸಿದರೂ ಈ ಕಟ್ಟಡ ಇದುವರೆಗೂ ಉಪಯೋಗಕ್ಕೆ ಬರುತ್ತಿಲ್ಲ. ಕಾಮಗಾರಿ ಮುಗಿದ ನಂತರವು 2 ಕೋಟಿ ರೂ. ಹೆಚ್ಚುವರಿ ಟೆಂಡರ್ ಕರೆದು ಭಾರಿ ಅವ್ಯವಹಾರ ನಡೆದಿದೆ ಎಂದು ತಿಳಿಸಿದರು.

- Advertisement -

2021ರಲ್ಲಿ ಐಬಿ ಟೆಂಡರ್ 4.76 ಕೋಟಿಗೆ ಬಿಮಲ್ ಗೆ ಟೆಂಡರ್ ಆಗಿತ್ತು. ಕಟ್ಟಡದಲ್ಲಿದ್ದ ಬೆಲೆ ಬಾಳುವ ವಸ್ತುಗಳಿಗೆ ಕೇವಲ 70,000ಕ್ಕೆ ಸಾಗಿಸಲಾಗಿದೆ. ಉದ್ಘಾಟನೆಗೊಂಡ ನಂತರ ವರ್ಕ್ ಆರ್ಡರ್ ಪಡೆದು ಕಾಮಗಾರಿ ಮುಗಿದ ನಂತರ ಕಾಮಗಾರಿಗೆ ಅನುದಾನ ಎಲ್ಲಾ ಕೆಲಸ ಮುಗಿದ ನಂತರ ಮತ್ತೆ 2 ಕೋಟಿಯ ಟೆಂಡರ್ ನಡೆದಿದೆ.

ಗುತ್ತಿಗೆದಾರ ಸಂಸ್ಥೆ ಬಿಮಲ್ ನವರಿಗೆ ಮೂರು ನೋಟಿಸ್ ಕಳುಹಿಸಿದರೂ ಆಗದೆ ಅವರು ಜವಾಬ್ದಾರಿ ಅಂತ ಎಲ್ಲರೂ ಎಸ್ಕೇಪ್ ಆಗ್ತಿದ್ದಾರೆ. ಬಿಮಲ್ ನವರು ಕೆಲಸ ಮುಗಿಸಿರುವ ಪತ್ರವೇ ಬೋಗಸ್, ಸಿಎ ಅಡ್ರಸ್ ಹುಡುಕಿದಾಗ ಆತ ನಿವೃತ್ತಿಯಾಗಿ ಎಷ್ಟೋ ವರ್ಷಗಳಾಗಿದೆ ಎಂದರು.

ಲೋಕಾಯುಕ್ತಕ್ಕೆ ದೂರು ನೀಡಿದವರಿಗೆ ಜೀವ ಬೆದರಿಕೆಯಿದೆ. ಐಬಿಯ ಬಾಗಿಲು ಓಪನ್ ಆಗ್ತಿಲ್ಲ, ಅಲ್ಲಿ ನಡೆಯುವುದು ಗುಪ್ತ ಮೀಟಿಂಗ್ ನಡೆಯುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೆಶ್ ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವಂದನಾ ಭಂಡಾರಿ, ನಮಿತಾ ತೋಟತ್ತಾಡಿ, ಜಿ.ಪಂ ಮಾಜಿ ಸದಸ್ಯರುಗಳಾದ ಶೇಖರ್ ಕುಕ್ಕೇಡಿ, ದರಣೇಂದ್ರ ಕುಮಾರ್ ಹಾಗು ಪಕ್ಷದ ಪ್ರಮುಖರಾದ ಸಂತೋಷ್ ಕುಮಾರ್ ಲಾಯಿಲ, ಅಬ್ದುಲ್ ಕರೀಂ, ಆಯಿಬು ಬಿ.ಕೆ, ಇಸ್ಮಾಯಿಲ್ ಪೆರಿಂಜೆ, ಹಕೀಂ ಕೊಕ್ಕಡ ಉಪಸ್ಥಿತರಿದ್ದರು.



Join Whatsapp