ಸುರತ್ಕಲ್ ರಸ್ತೆ ದುರಸ್ಥಿ ಕಾಮಗಾರಿ ಶೀಘ್ರ ನಡೆಸಿ; ಮನಪಾ ಆಯುಕ್ತರಿಗೆ ಎಸ್’ಡಿಪಿಐ ಮನವಿ

Prasthutha|

ಮಂಗಳೂರು: ಸುರತ್ಕಲ್ ರಸ್ತೆ ದುರಸ್ಥಿ ಕಾಮಗಾರಿ ಶೀಘ್ರ ನಡೆಸುವಂತೆ ಕೋರಿ ಎಸ್’ಡಿಪಿಐ ಸುರತ್ಕಲ್ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಾಂ ನೇತೃತ್ವದಲ್ಲಿ ಮನಪಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

- Advertisement -


ಸುರತ್ಕಲ್ ರೈಲ್ವೆ ಎಂ ಆರ್ ಪಿ ಎಲ್ ಹಾಗೂ ಚೊಕ್ಕಬೆಟ್ಟು ಕ್ರಾಸ್ ರಸ್ತೆ ತುಂಬಾ ವಾಹನಗಳು ಸಂಚಾರಿಸುವ ಪ್ರದೇಶವಾಗಿರುವುದರಿಂದ ಬ್ರಿಡ್ಜ್ ನಲ್ಲಿ ಹೊಂಡ ಬಿದ್ದು ಹದಗಿಟ್ಟಿದೆ.


ಈ ಕಾಮಗಾರಿ ಒಂದುವಾರದೊಳಗೆ ನಡೆಯದಿದ್ದರೆ ಸಾರ್ವಜನಿಕರನ್ನು ಒಟ್ಟುಗೂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.



Join Whatsapp