ತುರ್ತು ಪರಿಹಾರಕ್ಕಾಗಿ ದ.ಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್

Prasthutha|

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 5ನೇ ವಾರ್ಡ್ ಚೊಕ್ಕಬೆಟ್ಟು ಪರಿಸರದಲ್ಲಿ ಅತಿಯಾದ ಮಳೆ ಮತ್ತು ಬಿರುಗಾಳಿಗೆ ಹಾನಿಯಾದ 1 ಶಾಲೆ 27 ಮನೆ ಹಾಗೂ 1 ಕುರಿ ಸಾಕಾಣಿಕೆ ಕೊಠಡಿಗಳಿಗೆ ಶೀಘ್ರವಾಗಿ ಗರಿಷ್ಠ ಪರಿಹಾರವನ್ನು ಕೊಡಬೇಕೆಂದು ಒತ್ತಾಯಿಸಿ ಕಾರ್ಪೋರೇಟರ್ ಶಂಶಾದ್ ಅಬೂಬಕ್ಕರ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರರು, ಆಯುಕ್ತರು ಮತ್ತು ಉಪಾಯುಕ್ತರು ಮಂಗಳೂರು ತಾಲೂಕು ಇವರಿಗೆ ಮನವಿಯನ್ನು ಮಾಡಲಾಯಿತು.

- Advertisement -

ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಝರ್ ಚೊಕ್ಕಬೆಟ್ಟು, ನೌಶಾದ್ ಚೊಕ್ಕಬೆಟ್ಟು, ಸುರತ್ಕಲ್ ಬ್ಲಾಕ್ ಕಾರ್ಯದರ್ಶಿ ಅರಫತ್ ಚೊಕ್ಕಬೆಟ್ಟು, ಚೊಕ್ಕಬೆಟ್ಟು 29 ಮತ್ತು 30 ರ ಬ್ರಾಂಚ್ ಅಧ್ಯಕ್ಷರಾದಂತಹ ಮೊಹಮ್ಮದ್ ನವಾಝ್ ಮತ್ತು ಅಬ್ದುಲ್ ನವಾಝ್ ಪಜ್ಜು ಉಪಸ್ಥಿತರಿದ್ದರು.



Join Whatsapp